‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಸುಹಾಸಿನಿಗೆ ಈಗ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಇನ್ನೇನು ಧ್ರುವ ಹುಷಾರಾಗುತ್ತಿದ್ದಾನೆ. ಧ್ರುವ ಮತ್ತೆ ಮೊದಲಿನಂತಾದರೆ ಅವನ ಮೊದಲ ಟಾರ್ಗೆಟ್ ಸುಹಾಸಿನಿ. ಇದು ತಾಯಿಯ ಮುಖವಾಡ ಹಾಕಿಕೊಂಡಿರುವ ಸುಹಾಸಿನಿಗೆ ಭಯ ಬೀಳಿಸಿದೆ.ಎಷ್ಟಾಗತ್ತೋ ಅಷ್ಟು ಧ್ರುವನನ್ನು ಹೊರಗಡೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ಧ್ರುವ ಪದೇ ಪದೇ ಸುಹಾಸಿನಿಯ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ. ಇಂದು ಧ್ರುವ ವೀಲ್ಚೇರ್ ಮೇಲೆ ಕೂರುವಂತೆ ಮಾಡಿರೋದು ಆ ದುಷ್ಟೆ ಸುಹಾಸಿನಿ. ಇಷ್ಟುದಿನ ಅಮ್ಮನ ತರ ಇಡೀ ಕುಟುಂಬವನ್ನು ನರಕಕ್ಕೆ ತಳ್ಳಿದ, ಅಣ್ಣ-ತಮ್ಮನ ಮಧ್ಯೆ ಮನಸ್ತಾಪ ತಂಡ, ಅಜ್ಜಿಯ ಕಣ್ಣು ತೆಗೆದ, ಹೆತ್ತ ತಾಯಿಯನ್ನು ವನವಾಸಕ್ಕೆ ತಳ್ಳಿದ ಆ ಸುಹಾಸಿನಿಗೆ ಗತಿ ಕಾಣಿಸಬೇಕು ಎಂದು ಧ್ರುವ ಕಾದು ಕೂತಿದ್ದಾನೆ.ಇಡೀ ಕುಟುಂಬಕ್ಕೆ ಮೋಸ ಮಾಡಿರುವ ಸುಹಾಸಿನಿಯ ಪ್ರಾಣ ತೆಗೆಯಬೇಕು ಅಂತ ಧ್ರುವ ಅಂದುಕೊಂಡಿರುವಾಗಲೇ, ಸುಹಾಸಿನಿ ಅವನಿಗೆ ಆಸ್ಪತ್ರೆ ದರ್ಶನ ಮಾಡಿಸಿದ್ದಳು. ಈಗ ಸುಹಾಸಿನಿಗೆ ನಡುಕ ಶುರುವಾಗಿದೆ. ಆದಷ್ಟು ಬೇಗ ವೀಲ್ಚೇರ್ ಮೇಲೆ ಕೂತಿರುವ ಧ್ರುವನನ್ನು ಮತ್ತೆ ಬೆಡ್ ಮೇಲೆ ಮಲಗುವಂತೆ ಮಾಡಬೇಕು ಎಂದು ಸುಹಾಸಿನಿ ಪಣ ತೊಟ್ಟಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada