”ಗಟ್ಟಿಮೇಳ” ಸೀರಿಯಲ್ ಗ್ಯಾಂಗ್ ಮೇಲೆ ರಕ್ಷಿತ್ ಸೇರಿ ಮೇಲೆ 7 ಮಂದಿ FIR ಪ್ರಕರಣ;

ಬೆಂಗಳೂರು: ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಕೆಂಗೇರಿ ಬಳಿ ಇರುವ ಜಿಂಜರ್ ಲೇಕ್ ವ್ಯೂ ಹೋಟೆಲ್​ಗೆ ನಟ ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ, ಸೇರಿದಂತೆ 7 ಜನ ಊಟ ಮಾಡುವುದಕ್ಕೆ ಬಂದಿದ್ದರು.

ಈ ವೇಳೆ ಮದ್ಯ ಸೇವಿಸಿ ರಕ್ಷಿತ್ ಅಂಡ್ ಗ್ಯಾಂಗ್ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಆಂಡ್ ಗ್ಯಾಂಗ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಮಾತಿನ ಚಕಮಕಿ ನಡೆಸಿದ್ದಾರೆ.

7 ಜನರನ್ನು ಠಾಣೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್​ ಮಾಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಲ್ಕೋಹಾಲ್​ ಸೇವನೆ ಮಾಡಿರುವುದು ಪತ್ತೆ ಆಗಿದೆ. ಎನ್​ಡಿಎಂಎ ಮತ್ತು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸ್ಟೇಷನ್ ಬೇಲ್ ನೀಡಿ ಇವರನ್ನು ಬಿಡುಡಗೆ ಮಾಡಲಾಗಿದೆ. ಕೆಂಗೇರಿ ಪೊಲೀಸರು ಎನ್ ಡಿಎಂ ಎ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಿಕೊಂಡು ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಡಿಎನ್‌ಎ' ಟೆಸ್ಟ ಚಿತ್ರ ವಿಮರ್ಶೆ ಇಲ್ಲಿಧೆ ನೋಡಿ;

Sat Jan 29 , 2022
ಒಂದು ಫ್ಯಾಮಿಲಿ ಡ್ರಾಮಾದಲ್ಲಿ ನಾವು ಏನು ಬಯಸಬಹುದು ಹೇಳಿ? ಸುಂದರ ಸಂಸಾರ, ಅಲ್ಲೊಂದಷ್ಟು ಕಾಮಿಡಿ, ಭಾವನಾತ್ಮಕ ಸನ್ನಿವೇಶ, ಸಣ್ಣಪುಟ್ಟ ಮುನಿಸು, ಕೊನೆಗೆ ಎಲ್ಲರನ್ನು ಚಕಿತಗೊಳಿಸುವಂತಹ ಘಟನೆ… ಇಷ್ಟನ್ನು ನೀಟಾಗಿ ಕಟ್ಟಿಕೊಟ್ಟರೆ ಒಂದು ಸಿನಿಮಾವನ್ನು ಒಮ್ಮೆ ನೋಡಲಡ್ಡಿಯಿಲ್ಲ. ಕೋವಿಡ್‌ ನಿರ್ಬಂಧಗಳ ನಡುವೆಯೇ ಈ ವಾರ ತೆರೆಗೆ ಬಂದಿರುವ “ಡಿಎನ್‌ಎ’ ಚಿತ್ರ ಒಂದು ಫ್ಯಾಮಿಲಿ ಡ್ರಾಮಾವಾಗಿ ಮೆಚ್ಚುಗೆ ಪಡೆಯುತ್ತದೆ. ಸುಂದರ ಸಂಸಾರದಲ್ಲಿ ಬೀಸುವ ಒಂದು ಬಿರುಗಾಳಿ ಹೇಗೆ ಎರಡು ಸಂಸಾರದ ನಿದ್ದೆಗೆಡಿಸುತ್ತದೆ, ಒಂದು […]

Advertisement

Wordpress Social Share Plugin powered by Ultimatelysocial