ಅಫಜಲಪುರ: ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾಗಿರುವ ಅನುದಾನ ಸಂಪೂರ್ಣವಾಗಿ ಸದ್ಬಳಕೆ ಆಗಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.ತಾಲ್ಲೂಕುನ ಅತನೂರ ಗ್ರಾಮದಿಂದ ಬಿಲ್ವಾಡ್ (ಕೆ) ಗ್ರಾಮದವರೆಗೆ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಭಾಗದಲ್ಲಿ ಭೀಮಾ ಏತ ನೀರಾವರಿ ಯೋಜನೆ ಮಹತ್ವದಾಗಿದ್ದು, ಇದರಿಂದ 60 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ₹900 ಕೋಟಿ ಅನುದಾನ ಖರ್ಚೂದರೂ ಇಲ್ಲಿಯವರೆಗೂ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಬಹುತೇಕ ಕಾಲುವೆಗಳಲ್ಲಿ ಹೂಳು ತುಂಬಿ ನೀರು ಸರಬರಾಜು ಆಗುತ್ತಿಲ್ಲ. ನಿಗಮದ ಅಧಿಕಾರಿಗಳು ಅದನ್ನು ಆದಷ್ಟು ಬೇಗ ಸ್ವಚ್ಛಗೊಳಿಸಿ ನೀರು ಹರಿಸಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಅಭಿನವ ಗುರುಬಸವ ಶಿವಾಚಾರ್ಯರು ಮಾತನಾಡಿ, ಶಾಸಕ ಎಂ.ವೈ.ಪಾಟೀಲ ಕ್ಷೇತ್ರದಲ್ಲಿ ಸಿಸಿರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆ,ಶಾಲೆ ಕಟ್ಟಡ ನಿರ್ಮಾಣ, ಬ್ಯಾರೇಜ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ಜಗನ್ನಾಥ ಗೊಳಸಾರ, ಮುಖಂಡರಾದ ಮಲ್ಲಿಕಾರ್ಜುನ, ಸಿದ್ದುಗೌಡ ಪಾಟೀಲ, ಹಣಮಂತರಾಯ ಕಲಬುರಗಿ, ಶಿವರಾಯಗೌಡ ಪಾಟೀಲ, ಬಸವರಾಜ ಪಾಟೀಲ, ಖಾದರಸಾಬ್ ಮುಜಾವರ, ಶ್ರಾವಣ ಕಾಂಬಳೆ, ಸತೀಶ್ ಕಾಂಬಳೆ, ಸಂಗು ಹಲಕಟ್ಟಿ, ಸುಧಾಕರ ಎಸ್.ಕೆ, ಸಿದ್ದು ಉಪ್ಪಿನ, ಅಧಿಕಾರಿಗಳಾದ ಉಷಾರಾಣಿ ಪಾಟೀಲ, ಸಂತೋಷಕುಮಾರ ಸಜ್ಜನ್, ಗುರುಲಿಂಗಪ್ಪ ಪಾಣೇಗಾಂವ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada