ಎಚ್. ಎಸ್. ಪಾರ್ವತಿ ಅವರು ಆಕಾಶವಾಣಿ ಕಲಾವಿದರಾಗಿ, ವೈವಿಧ್ಯಪೂರ್ಣ ಬರಹಗಾರರಾಗಿ, ಸಾಮಾಜಿಕ ಕಳಕಳಿಯ ಚಿಂತಕರಾಗಿ, ಕರ್ನಾಟಕ ಲೇಖಕಿಯರ ಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದವರಾಗಿ ಮತ್ತು ಅದ್ಭುತ ಸಂಘಟಕರಾಗಿ ಪ್ರಸಿದ್ಧರಾಗಿದ್ದವರು.ಎಚ್. ಎಸ್. ಪಾರ್ವತಿ 1934ರ ಫೆಬ್ರವರಿ 3ರಂದು ಜನಿಸಿದರು. ತಂದೆ ಎಚ್. ಶ್ರೀನಿವಾಸರಾವ್. ತಾಯಿ ಮಹಾಲಕ್ಷ್ಮಮ್ಮ. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಓದಿದ ಪಾರ್ವತಿ ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಎಂ. ಎ. ಪದವಿ ಪಡೆದರಲ್ಲದೆ, ಉನ್ನತ ಹಿಂದಿ ಪ್ರಾವಿಣ್ಯತಾ ಪರೀಕ್ಷೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಅಣ್ಣ ಎಚ್.ಎಸ್. ಸೂರ್ಯನಾರಾಯಣ (‘ಸೂರಿ’) ಅವರು ಪ್ರಜಾವಾಣಿಯಲ್ಲಿ ‘ಕ್ರೀಡಾಂತರಂಗ’ ಅಂಕಣದಿಂದ ಪ್ರಸಿದ್ಧರಾಗಿದ್ದರಲ್ಲದೆ ಆಕಾಶವಾಣಿಯಲ್ಲಿ ಕ್ರೀಡೆಯ ವೀಕ್ಷಕ ವಿವರಣೆ ನೀಡುವುದರಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಪಾರ್ವತಿ ಅವರು ಎಮ್.ಎಸ್. ಶ್ರೀಹರಿ ಅವರನ್ನು ವಿವಾಹವಾದರು. ಪ್ರಗತಿಶೀಲ ಮನೋಭಾವದವರಾದ ಪಾರ್ವತಿ ಅವರದ್ದು ಅಂದಿನ ಕಾಲದಲ್ಲೇ ಪ್ರೇಮ ವಿವಾಹ.ಪಾರ್ವತಿ ಅವರು 1958ರಲ್ಲಿ ಆಕಾಶವಾಣಿ ಸೇರಿ ಕಾರ್ಯಕ್ರಮ ನಿರ್ವಾಹಕರಾಗಿ ಮೈಸೂರು ಹಾಗೂ ಬೆಂಗಳೂರು ಕೇಂದ್ರಗಳಲ್ಲಿ 32 ವರ್ಷ ಕಾರ್ಯನಿರ್ವಹಿಸಿ, 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada