ಇಂದು ಹನುಮ ಜಯಂತಿ:

 

ಇಬ್ಬರು ಯುವಕರು ತಮ್ಮತ್ತ ಬರುತ್ತಿರುವುದನ್ನು ಸುಗ್ರೀವ ಗಮನಿಸಿದ. ಅವರ ಮುಖದಲ್ಲಿ ಅಪಾರ ಕಾಂತಿ, ತಾಪಸಿಗಳಂತೆ ಕಾಣುತ್ತಾರೆ, ಆದರೆ ಅವರ ವಿಶಾಲವಾದ ಭುಜ, ಕೈಯಲ್ಲಿ ಹಿಡಿದಿರುವ ಧನುಸ್ಸು ಅವರನ್ನು ಕ್ಷತ್ರಿಯರು ಎನ್ನುತ್ತಿದೆ. ವಾಲಿ ಕಳುಹಿಸಿರಬಹುದೇ?.. ಸಂಶಯ ನಿವಾರಿಸಲು ಅವರ್ಯಾರೆಂದು ತಿಳಿದುಬರಲು ಸುಗ್ರೀವ ಕಳುಹಿಸಿದ್ದು ಆಂಜನೇಯನನ್ನು.

ಹನುಮಂತ ಭಿಕ್ಷುವಿನ ವೇಷದಲ್ಲಿ ಇಬ್ಬರು ಯುವಕರ ಮುಂದೆ ನಿಂತು ಮಾತಾ ನಾಡಲಾರಂಭಿಸಿದ. ಶ್ರೀ ರಾಮ-ಹನುಮರ ಮೊದಲ ಭೇಟಿಯದು. ಹನುಮನ ವಾಗ್ವೈಭವಕ್ಕೆ ಶ್ರೀರಾಮನೇ ಬೆರಗಾಗಿ ಹೋದ. ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಗಳನ್ನು ಅರ್ಥಸಹಿತವಾಗಿ ಅಧ್ಯಯನ ಮಾಡದೇ ಇರುವ ವರಿಗೆ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಯಾವುದೇ ನುಡಿಯನ್ನು ಅನಾವಶ್ಯಕವಾಗಿ ವಿಸ್ತಾರ ಮಾಡದೆ, ಅಸ್ಫುಟ ಉಚ್ಛಾರಣೆಯಿಲ್ಲದೆ, ಮಧ್ಯಮ ಸ್ವರದಲ್ಲಿ ಈತ ಮಾತನಾಡುತ್ತಿದ್ದಾನೆ. ಈ ಬಗೆಯ ಗುಣಗಳಿಂದ ಕೂಡಿದ ದೂತರು ಯಾವ ರಾಜನಿಗೆ ಕಾರ್ಯಸಾಧಕರಾಗಿದ್ದರೋ ದೂತನ ವಾಗ್ವೈಖರಿಯಿಂದಲೇ ಆ ರಾಜನ ಸಕಲ ಕಾರ್ಯಗಳು ಸಿದ್ಧಿಸುತ್ತವೆ ಎಂದಿದ್ದ ಶ್ರೀರಾಮ. ತನ್ನ ಮೊದಲ ಭೇಟಿಯಲ್ಲೇ ಹನುಮ ತನ್ನ ಪ್ರಭುವಿನ ಮನಸ್ಸನ್ನು ಗೆದ್ದಿದ್ದ.

ರಾಮ-ಸೀತೆಯರು ವಿಯೋಗದಿಂದ ದಗ್ಧರಾಗಿ ಹೋಗಿದ್ದಾರೆ. ಒಬ್ಬರಿಗೊಬ್ಬರ ಕ್ಷೇಮಸಮಾಚಾರಗಳ ಸುಳಿವಿಲ್ಲದೆ ಬಹುಕಾಲ ಕಳೆದು ಹೋಗಿದೆ. ಆಗ ಶ್ರೀರಾಮನಿಂದ ಉಂಗುರವನ್ನು ಪಡೆದು ಸೀತಾಮಾತೆಗೆ ತಲುಪಿಸಿ ಆಕೆಯಿಂದ ಚೂಡಾಮಣಿಯನ್ನು ತಂದು ಶ್ರೀರಾಮನಿ ಗೊಪ್ಪಿಸಿದ ಪರಸ್ಪರರ ಕುಶಲತೆಯ ವಾರ್ತೆಯನ್ನು ಮುಟ್ಟಿಸಿ ಸುಂದರ ಕಾಂಡಕ್ಕೆ ನಾಂದಿಯಾಗಿದ್ದು ಆಂಜನೇಯ.

ರಾಮಾಯಣದಲ್ಲಿ ಬೇರಾವುದೇ ಪಾತ್ರಗಳಿಲ್ಲದೇ ಹೋದರೂ ನಡೆದೀತು, ಆದರೆ ಹನುಮಂತನಿಲ್ಲದ ರಾಮಾಯಣ ಅಕಲ್ಪನೀಯ. ಸಾಧನೆಯ ದ್ಯೋತಕ, ಶಕ್ತಿಯ ಪ್ರದರ್ಶನ, ಯುಕ್ತಿಯ ದರ್ಶನ ಹಾಗೂ ಸ್ವಾಮಿ ನಿಷ್ಠೆಯ ಪರಾಕಾಷ್ಠೆ ಇವೆಲ್ಲ ಗುಣಗಳ ಸಾಕಾರಮೂರ್ತಿ ಆಂಜನೇಯ. ತನ್ನ ಪ್ರಭು ಶ್ರೀ ರಾಮನ ಕಾರ್ಯವೇ ಆಂಜನೇಯ ನಿಗೆ ಘನ ತಣ್ತೀ. ತನ್ನ ಸ್ವಂತದ ಕುರಿತಾಗಿ ಆಲೋಚನೆಯನ್ನೇ ಮಾಡದೆ ಪ್ರಭುವಿನ ಕಾರ್ಯಕ್ಕಾಗಿ ಹಗಲಿರುಳೆನ್ನದೆ ತನುಮನಗಳಿಂದ ಶ್ರಮಿಸಿ ಅದರಲ್ಲಿ ತನ್ನ ಜೀವಭಾರವನ್ನು ಮರೆತ ಹನುಮನ ಆದರ್ಶವೇ ಡಿವಿಜಿಯವರಿಗೂ ಪ್ರೇರಣೆ ನೀಡಿತು.

ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು | ನೆನೆಯದಿನ್ನೊಂದನೆಲ್ಲವ ನೀಡುತದರಾ || ಅನುಸಂಧಿಯಲಿ ಜೀವಭಾರವನು ಮರೆಯುವುದು | ಹನುಮಂತನುಪದೇಶ – ಮಂಕುತಿಮ್ಮ || ಎನ್ನುತ್ತಾ ಕೇವಲ ನಾಲ್ಕು ಸಾಲುಗಳಲ್ಲಿ ಆಂಜನೇಯನ ವ್ಯಕ್ತಿತ್ವವನ್ನು ಚಿತ್ರಿಸಿದರಲ್ಲದೆ, ಆ ಕಗ್ಗದ ಮೂಲಕ ಸಾಮಾ ನ್ಯನೂ ಸಾಧಕನಾಗಬಲ್ಲ ಮಾರ್ಗ ತೋರಿದರು.

ಹನುಮಂತ ತನ್ನ ಸ್ವಾಮಿನಿಷ್ಠೆಯಿಂದಾಗಿ ತನ್ನ ದೈವ ಶ್ರೀ ರಾಮನಿಗಿಂತಲೂ ಹೆಚ್ಚಾಗಿ ತಾನು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾನೆ ಎಂದರೆ ಅದು ಅಚ್ಚರಿಯಲ್ಲ. ಜಗತ್ತಿನಲ್ಲಿ ಶ್ರೀ ರಾಮನ ಮಂದಿರಗಳಿಗಿಂತ ಆಂಜನೇಯನ ದೇವಸ್ಥಾನಗಳ ಸಂಖ್ಯೆಯೇ ಅಧಿಕವಾಗಿದೆ, ಮಾತ್ರವಲ್ಲ ಎಲ್ಲ ಶ್ರೀ ರಾಮನ ಮಂದಿರಗಳಲ್ಲಿ ಆಂಜನೇಯ ಇರಲೇಬೇಕು. ಆದರೆ ಹನುಮಂತನ ಗುಡಿಗಳಲ್ಲಿ ರಾಮನ ವಿಗ್ರಹವಿಲ್ಲ. ಸೇವೆ ಹಾಗೂ ಸ್ವಾಮಿನಿಷ್ಠೆಯಿಂದ ಯಾವ ಎತ್ತರಕ್ಕೆ ಏರಬಹುದೆಂದು ಆಂಜನೇಯ ನಮಗೆ ತೋರಿಸಿದ ದಾರಿ ಇದು.

ಸೀತೆಯನ್ನು ಒಮ್ಮೆಯೂ ಕಂಡಿಲ್ಲದ ಹನುಮ ಸ್ವರ್ಣ ಲಂಕೆಗೆ ಬಂದಿದ್ದಾನೆ. ತಾನು ಸೀತಾಮಾತೆಯ ಕುರಿತಾಗಿ ಕೇಳಿರುವ ಆಕೆಯ ಗುಣಗಳನ್ನು ಆಧಾರವಾಗಿಟ್ಟು ಕೊಂಡು ಆಕೆಯ ರೂಪವನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದಾನೆ. ಲಂಕೆಯಲ್ಲಿ ಅದೆಷ್ಟೋ ರೂಪವಂತ ಸ್ತ್ರೀಯರನ್ನ ನೋಡಿದಾಗಲೂ ಈಕೆ ನನ್ನ ಸೀತಾಮಾತೆಯಲ್ಲ, ಈಕೆಯೂ ಅಲ್ಲ.. ಅನ್ನುತ್ತಾ ಕೊನೆಗೆ ಅಶೋಕವನದಲ್ಲಿ ಕುಳಿತ ಸ್ತ್ರೀಯನ್ನು ನೋಡಿ ಆನಂದದಿಂದ ಮರದ ಮೇಲಿ ನಿಂದಲೇ ನಮಸ್ಕರಿ ಸಿದ. ಧುತ್ತನೆ ಆಕೆಯ ಮುಂದೆ ನಿಂತು ನಾನು ಆಂಜನೇಯ, ರಾಮನ ದೂತ’ ಎನ್ನಲಿಲ್ಲ. ಹನು ಮಂತ ಒಬ್ಬ ಮನಶಾಸ್ತ್ರಜ್ಞ. ಆ ರೀತಿ ಹೋದಾಗ ಆಕೆ ಗಾಬರಿ ಯಾಗುತ್ತಾಳೆ ಎಂದು ಯೋಚಿಸಿ, ಮರದ ಮೇಲೆ ಕುಳಿತು ದಶರಥ ಹಾಗೂ ಶ್ರೀ ರಾಮನ ಕಥೆಗಳನ್ನು ಮೆಲುವಾಗಿ ಹಾಡತೊಡಗಿದ. ಆ ಕಥೆ ಗಳನ್ನು ಕೇಳುತ್ತಾ ಕೇಳುತ್ತಾ ಸೀತೆಗೆ ಈ ಹಾಡು ಹಾಡುತ್ತಿರುವವ ನಮ್ಮವನಿರಬೇಕು ಎನಿಸಿತು. ಭಯ ದೂರವಾಯಿತು. ಆಗ ಆಕೆಯ ಮುಂದೆ ಬಂದು ಮಂಡಿ ಯೂರಿ ತನ್ನ ಪರಿಚಯಿಸಿಕೊಂಡು ಶ್ರೀ ರಾಮನ ಮುದ್ರೆಯುಂಗುರವನ್ನಿತ್ತ ಮನಶಾಸ್ತ್ರಜ್ಞ ಹನುಮ.

ಸೀತೆಗೆ ಉಂಗುರವಿತ್ತು ಆಕೆಯಿಂದ ಚೂಡಾ ಮಣಿಯನ್ನು ಪಡೆದಾಗಿದೆ. ಮರಳಿ ಹೊರಡಬೇಕೆನ್ನುವಾಗ ಹನುಮನ ಒಳಗಿದ್ದ ಆ ರಣತಂತ್ರಗಾರ ಜಾಗ್ರತನಾದ. ಹೇಗಿದ್ದರೂ ಇನ್ನೂ ಒಂದೆರಡು ತಿಂಗಳು ಕಳೆದು ಇದೇ ನೆಲಕ್ಕೆ ಯುದ್ಧಕ್ಕೆ ಬರಬೇಕು. ಅಸ್ತ್ರಶಸ್ತ್ರಗಳ ಬಲಾಬಲಕ್ಕಿಂತ ಮೊದಲು ಶತ್ರುವಿನ ಎದೆಯಲ್ಲಿ ಭೀತಿಯನ್ನು ಹುಟ್ಟಿಸಬೇಕು. ಅದರಲ್ಲಿ ಯಶಸ್ವಿಯಾದರೆ ಅರ್ಧ ಯುದ್ಧ ಗೆದ್ದಂತೆ. ಯೋಚನೆ ಬಂದಿದ್ದೇ ತಡ ಅಶೋಕವನದ ಧ್ವಂಸ ಪ್ರಾರಂಭವಾಯಿತು. ತಡೆಯಲು ಬಂದ ಸಾವಿರಾರು ರಾಕ್ಷಸರಿಗೆ ತನ್ನ ಅಗಾಧ ಶಕ್ತಿಯ ಪರಿಚಯ ಮಾಡಿಸಿದ. ಕೊನೆಗೆ ಆಂಜನೇಯನನ್ನು ಬಂಧಿಸಲು ಇಂದ್ರಜಿತು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಬೇಕಾಯಿತು.

ಮೊದಲ ಬಾರಿ ರಾವಣನನ್ನು ನೋಡಿದಾಗ ಹನುಮಂತ ನಾಡುವ ಮಾತುಗಳು ನಿಜಕ್ಕೂ ನಮಗೆ ಒಳ್ಳೆಯ ಪಾಠ. ಅಹೋ ರೂಪಂ, ಅಹೋ ಧೈರ್ಯಂ, ಅಹೋ ಸಣ್ತೀಂ ಅಹೋದ್ಯುತಿಃ| ಅಹೋ ರಾಕ್ಷಸ ರಾಜಸ್ಯ, ಸರ್ವಲಕ್ಷಣ ಯುಕ್ತಯಾ|| ಏನು ರೂಪ, ಏನು ಧೈರ್ಯ, ಸಣ್ತೀಗಳು ಇವನಲ್ಲಿ! ಸಮಸ್ತ ರಾಜ ಲಕ್ಷಣಗಳಿವೆ ಈ ರಾವಣನಲ್ಲಿ ಎಂದು ಶತ್ರುವಿನಲ್ಲಿ ಇರುವ ಸಕಾರಾತ್ಮಕ ಗುಣಗಳನ್ನು ಗುರುತಿಸಿ ಹೇಳುವ ಶತ್ರುಗುಣ ಪ್ರಶಂಸಕ ಹನುಮ ಇಲ್ಲೂ ನಮಗೆ ಪಾಠ ವಾಗುತ್ತಾನೆ, ಹಾಗೆಂದು ಅವನ ದುರ್ಗುಣ ಗಳನ್ನು ಹೇಳದೇ ಇರುವುದಿಲ್ಲ.

ಎಲ್ಲ ಲಕ್ಷಣಗಳಿವೆ ನಿಜ, ಆದರೆ ಇವನಲ್ಲಿ ಬಲವಾದ ಅಧರ್ಮವೊಂದು ಇಲ್ಲದೇ ಹೋಗಿದ್ದರೆ ಇವನು ಆ ಇಂದ್ರನಿಗೆ ಅಧಿಪತಿಯಾಗುತ್ತಿದ್ದ ಎಂದು ಚುಚ್ಚುತ್ತಾನೆ. ಕೆಲವೇ ಗಂಟೆಗಳಲ್ಲಿ ರಾವಣ ಕುಲ ದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಹನುಮ ಈಗ ಸ್ವತಃ ರಾವಣನ ಮುಂದೆ ಕುಳಿತು ನಾನೊಬ್ಬನೇ ಇಷ್ಟೆಲ್ಲ ಮಾಡ ಬಹುದಾದರೆ, ಯೋಚಿಸು ರಾವಣ… ನನಗಿಂತ ಬಲಿಷ್ಠ ರಾದ ಲಕ್ಷಾಂತರ ಮಂದಿ ವಾನರರು ಶ್ರೀ ರಾಮನ ಜತೆಗಿದ್ದಾರೆ. ಎಂದು ಘರ್ಜಿಸಿ ಲಂಕಾಧಿಪತಿಯಲ್ಲೂ ಭಯದ ಮೊದಲ ಬೀಜ ಬಿತ್ತಿದ್ದ ರಣತಂತ್ರಗಾರ ಆಂಜನೇಯ. ಸಾಲದು ಎಂಬಂತೆ ತನ್ನ ಬಾಲಕ್ಕೆ ಹಚ್ಚಿದ ಬೆಂಕಿ ಯಿಂದ ಅರ್ಧ ಲಂಕೆಯನ್ನು ಸುಟ್ಟು ಅರ್ಧ ಯುದ್ಧವನ್ನು ಗೆದ್ದಿದ್ದ.

ರಾವಣನ ಸಂಹಾರ, ಸೀತೆಯ ಅಗ್ನಿ ಪರೀಕ್ಷೆಗಳು ಮುಗಿದಿವೆ. ಅಯೋಧ್ಯೆಯಲ್ಲಿ ಮತ್ತೆ ಸಂಭ್ರಮದ ವಾತಾವರಣ. ಶ್ರೀ ರಾಮ ತನ್ನ ಸತಿ ಸೀತೆಗೆ ಅಪರೂಪದ ರತ್ನಖಚಿತವಾದ ಹಾರವೊಂದನ್ನು ಉಡುಗೊರೆಯಾಗಿ ನೀಡುತ್ತಾನೆ. ಆದರೆ ಸೀತೆ ಇದು ಸೇರಬೇಕಾಗಿರುವುದು, ನಮ್ಮೆಲ್ಲರ ಆನಂದಕ್ಕೆ ಕಾರಣನಾದವನಿಗೆ, ತೇಜ, ಯಶ, ದಕ್ಷತೆ, ಧೃತಿ, ಸಾಮರ್ಥ್ಯ, ನಯ, ವಿನಯ, ಪೌರುಷ, ವಿಕ್ರಮ, ಬುದ್ಧಿ ಈ ಎಲ್ಲ ಗುಣಗಳ ಸಾಕಾರಮೂರ್ತಿ ಹನುಮನಿಗೆ.. ಎನ್ನುತ್ತ ಆ ಹಾರವನ್ನು ಆಂಜನೇಯನ ಕೊರಳಿಗೆ ಹಾಕುತ್ತಾಳೆ. ನಿರಪೇಕ್ಷವಾದ ಸೇವೆಗೆ ಫ‌ಲ ನಿಶ್ಚಿತ ಎನ್ನುವುದಕ್ಕೆ ಆಂಜನೇಯನೇ ನಮಗೆ ಉದಾಹರಣೆ.

ಇಂದು ಹನುಮ ಜಯಂತಿ ನಾವು ಸ್ವೀಕರಿಸಿರುವ ಧ್ಯೇಯದ ಅನುಸಂಧಿಯಲಿ ಜೀವಭಾರವನ್ನು ಮರೆಯುವ ಆಂಜನೇಯರು ನಾವಾಗೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಬಹು ಚರ್ಚಿತ ವಿಚಾರ.

Sat Apr 16 , 2022
ಬೆಂಗಳೂರು, ಏಪ್ರಿಲ್ 15; ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಬಹು ಚರ್ಚಿತ ವಿಚಾರ. ಕ್ಷೇತ್ರದ ಹಾಲಿ ಶಾಸಕ ಜಿ. ಟಿ. ದೇವೇಗೌಡರು ಕಾಂಗ್ರೆಸ್‌ನತ್ತ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ  ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಲವು ಬಾರಿ ಕೇಳಿ ಬಂದಿವೆ. ಚನ್ನಪಟ್ಟಣದ ಶಾಸಕರಾಗಿರುವ ಅವರು ರಾಮನಗರ ಬಿಟ್ಟು ಮೈಸೂರಿಗೆ ತೆರಳಲಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ. ಜೆಡಿಎಸ್ ಪಕ್ಷ ಜಿ. ಟಿ. ದೇವೇಗೌಡರಿಗೆ ಪರ್ಯಾಯ […]

Advertisement

Wordpress Social Share Plugin powered by Ultimatelysocial