ಹಸರಂಗ ಬಾಲ್​ಗೆ ಚಿಂದಿ ಚಿಂದಿಯಾಗಿ ಆಡಿದ ಅಕ್ಸರ್, ಸೂರ್ಯ..!

ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ವಿರೋಚಿತ ಸೋಲನ್ನು ಕಂಡಿತು. ಗೆಲ್ಲಲೇಬೇಕು ಅಂತಾ ಪಣತೊಟ್ಟು ನಿಂತಿದ್ದ ಅಕ್ಸರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.ವಿಶೇಷ ಅಂದರೆ ಆರ್​ಸಿಬಿ ಪರ ಆಡುವ ಸ್ಟಾರ್ ಆಟಗಾರ ವನಿಂದು ಹಸರಂಗ ಅವರ ಒಂದು ಓವರ್​ನಲ್ಲಿ ಬರೋಬ್ಬರಿ 26 ರನ್​ಗಳಿಸಿ ಸಖತ್​​ ಮನರಂಜನೆ ನೀಡಿದರು.14ನೇ ಓವರ್ ಎಸೆಯಲು ಬಂದ ಹಸರಂಗರನ್ನು ಚೆನ್ನಾಗಿ ಬೆಂಡೆತ್ತಿದ್ದರು. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಭಯ ಹುಟ್ಟಿಸಿದರು.ಅದೇ ರೀತಿ ಎರಡನೇ ಮತ್ತು ಮೂರನೇ ಬಾಲ್​ನಲ್ಲೂ ಸಿಕ್ಸರ್ ಎತ್ತುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದರು. 4ನೇ ಬಾಲ್​​ನಲ್ಲಿ ಸಿಂಗಲ್ ತೆಗೆದುಕೊಂಡು ಸೂರ್ಯಗೆ ಕ್ರೀಸ್ ಬಿಟ್ಟುಕೊಟ್ಟರು. ಸೂರ್ಯ ಕೂಡ ಐದನೇ ಬಾಲ್​ ಸಿಕ್ಸರ್​ಗೆ ಕಳುಹಿಸುವ ಮೂಲಕ ಟೀಂ ಇಂಡಿಯಾದ ಅಭಿಮಾನಿಗಳನ್ನು ಫುಲ್ ಖುಷಿ ಪಡಿಸಿದರು. ಇನ್ನೂ ಕೊನೆಗೆ ಬಾಲ್​ನಲ್ಲಿ ಒಂದು ರನ್​ ಬಂತು. ಈ ಮೂಲಕ ಹಸರಂಗ ಅವರ ಒಂದು ಓವರ್​ನಲ್ಲಿ 26 ರನ್​ಗಳಿಸಿ ಪಂದ್ಯಕ್ಕೆ ಹೊಸ ಟರ್ನಿಂಗ್ ಕೊಟ್ಟರು.ಮೊದಲು ಬ್ಯಾಟ್ ಮಾಡಿದ್ದ ಲಂಕಾ ಪಡೆ 6 ವಿಕೆಟ್ ಕಳೆದುಕೊಂಡು 206ರನ್​​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 8 ವಿಕೆಟ್ ಕಳೆದುಕೊಂಡು 190 ರನ್​ಗಳಿಸಿ 16 ರನ್​ಗಳ ಸೋಲನ್ನು ಕಂಡಿತು. ಈ ಮೂಲಕ ಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ!

Fri Jan 6 , 2023
ಬೆಳಗಾಂವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದ ಭಾರತಿಯ ಕೃಷಿಕ ಸಮಾಜ ರೈತ ಸಂಘಟನೆಯಿಂದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ನಡೆದಾಡುವ ದೇವರೆಂದೆ ಪ್ರಖ್ಯಾತಿಯಾಗಿರುವ ವಿಜಯಪೂರ ಜಿಲ್ಲೆಯ ಜ್ಞಾನಯೋಗಾಶ್ರಮದ ಪೂಜ್ಯರಾದ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರಿಗೆ ಭಾರತಿಯ ಕೃಷಿಕ ಸಮಾಜ ರೈತ ಸಂಘಟನೆಯ ಎಲ್ಲಾ ಸದಸ್ಯರಿಂದ ಹಾಗೂ ಯರಝರ್ವಿ ಗ್ರಾಮ ಘಟಕ ಸದಸ್ಯರಿಂದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವದರೊಂದಿಗೆ ಭಕ್ತಿಪೂರ್ವಕ ಶ್ರದ್ದಾಂಜಲಿ ಸಲ್ಲಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial