ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ವಿರೋಚಿತ ಸೋಲನ್ನು ಕಂಡಿತು. ಗೆಲ್ಲಲೇಬೇಕು ಅಂತಾ ಪಣತೊಟ್ಟು ನಿಂತಿದ್ದ ಅಕ್ಸರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.ವಿಶೇಷ ಅಂದರೆ ಆರ್ಸಿಬಿ ಪರ ಆಡುವ ಸ್ಟಾರ್ ಆಟಗಾರ ವನಿಂದು ಹಸರಂಗ ಅವರ ಒಂದು ಓವರ್ನಲ್ಲಿ ಬರೋಬ್ಬರಿ 26 ರನ್ಗಳಿಸಿ ಸಖತ್ ಮನರಂಜನೆ ನೀಡಿದರು.14ನೇ ಓವರ್ ಎಸೆಯಲು ಬಂದ ಹಸರಂಗರನ್ನು ಚೆನ್ನಾಗಿ ಬೆಂಡೆತ್ತಿದ್ದರು. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಭಯ ಹುಟ್ಟಿಸಿದರು.ಅದೇ ರೀತಿ ಎರಡನೇ ಮತ್ತು ಮೂರನೇ ಬಾಲ್ನಲ್ಲೂ ಸಿಕ್ಸರ್ ಎತ್ತುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದರು. 4ನೇ ಬಾಲ್ನಲ್ಲಿ ಸಿಂಗಲ್ ತೆಗೆದುಕೊಂಡು ಸೂರ್ಯಗೆ ಕ್ರೀಸ್ ಬಿಟ್ಟುಕೊಟ್ಟರು. ಸೂರ್ಯ ಕೂಡ ಐದನೇ ಬಾಲ್ ಸಿಕ್ಸರ್ಗೆ ಕಳುಹಿಸುವ ಮೂಲಕ ಟೀಂ ಇಂಡಿಯಾದ ಅಭಿಮಾನಿಗಳನ್ನು ಫುಲ್ ಖುಷಿ ಪಡಿಸಿದರು. ಇನ್ನೂ ಕೊನೆಗೆ ಬಾಲ್ನಲ್ಲಿ ಒಂದು ರನ್ ಬಂತು. ಈ ಮೂಲಕ ಹಸರಂಗ ಅವರ ಒಂದು ಓವರ್ನಲ್ಲಿ 26 ರನ್ಗಳಿಸಿ ಪಂದ್ಯಕ್ಕೆ ಹೊಸ ಟರ್ನಿಂಗ್ ಕೊಟ್ಟರು.ಮೊದಲು ಬ್ಯಾಟ್ ಮಾಡಿದ್ದ ಲಂಕಾ ಪಡೆ 6 ವಿಕೆಟ್ ಕಳೆದುಕೊಂಡು 206ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 8 ವಿಕೆಟ್ ಕಳೆದುಕೊಂಡು 190 ರನ್ಗಳಿಸಿ 16 ರನ್ಗಳ ಸೋಲನ್ನು ಕಂಡಿತು. ಈ ಮೂಲಕ ಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada