ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಹಾರಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತಿದ್ದ ಮಲ್ಲಮ್ಮ 85 ಎಂಬ ವೃದ್ದೆಯನ್ನು ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ಮೊಮ್ಮಗ ಸುಧರ್ಶನ್ ಅಜ್ಜಿಯನ್ನು ಮಾತನಾಡಿಸಲೆಂದು ಹೋದಾಗ ಬಾಗಿಲು ಮೊದಲೇ ತೆರೆದಂತೆ ಕಂಡುಬಂದು ಒಳಗೆ ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ.
ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ವಿಷಯ ತಿಳಿದ ಯಶಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಶ್ವಾನ ದಳದ ಸಹಾಯದಿಂದ -ಅರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಪಕ್ಕದ ಗ್ರಾಮವಾದ ನಾರೂರಿನ ಕುಶ (ರುದ್ರೇಗೌಡ ) ಆರೋಪಿಯಾಗಿದ್ದು ಕುಡಿತದ ದುಷ್ಟಕ್ಕೆ ದಾಸನಾಗಿ ಕುಡಿಯಲು ಹಣದ ಆಸೆಗಾಗಿ ಕೊಲೆ ಮಾಡಿದ್ದಾನೆ.ವೃದ್ದೆಯನ್ನು ಉಸಿರುಗಟ್ಟಿಸಿ ನಂತರ ಕಲ್ಲು ಎತ್ತಿ ಹಾಕಿ – ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾಗಿ ಆರೋಪಿಯು ಒಪ್ಪಿಕೊOಡಿ ರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada