ವಿಲಕ್ಷಣ ಪ್ರಕರಣ : ಆತ್ಮಗಳ ಜೊತೆ ಮಾತನಾಡಲು ಮನೆ ಬಿಟ್ಟ ಅಪ್ರಾಪ್ತೆ.. ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಪೋಷಕರು.!

ವಿಲಕ್ಷಣ ಪ್ರಕರಣ : ಆತ್ಮಗಳ ಜೊತೆ ಮಾತನಾಡಲು ಮನೆ ಬಿಟ್ಟ ಅಪ್ರಾಪ್ತೆ.. ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಪೋಷಕರು.!!
ಬೆಂಗಳೂರಿನಲ್ಲಿ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಗಳ ಜೊತೆ ಮಾತನಾಡುವುದಾಗಿ ಹೇಳಿ 2 ತಿಂಗಳ ಹಿಂದೆ ಮನೆಬಿಟ್ಟು ಹೊರಟಿದ್ದಾಳೆ. ವಿಪರ್ಯಾಸ ಅಂದ್ರೆ ಆಕೆ ಇಲ್ಲಿಯವರೆಗೆ ಹಿಂದಿರುಗಿಲ್ಲ.

ಬೆಂಗಳೂರಿನ 17 ವರ್ಷದ ಅನುಷ್ಕಾ ಅನ್ನೋ ಬಾಲಕಿ, ಆತ್ಮಗಳಿವೆ ಎಂದು ದೃಢವಾಗಿ ನಂಬಿದ್ದು, ತಾನು ಆಗಾಗ್ಗೆ ಆತ್ಮಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದು ಮನೆಯವರಿಗೆ ಹೇಳಲು ಪ್ರಾರಂಭಿಸಿದ್ದಾಳೆ. ಇನ್ನು ಮನೆ ಮಂದಿಯೆಲ್ಲಾ ಕುಳಿತಾಗಲು ತಾನು ಆತ್ಮದ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆದ್ರೆ, ಇದನ್ನೇಲ್ಲಾ ಗಂಭೀರವಾಗ ಪರಿಗಣಿಸದ ಪೋಷಕರು ಸುಮ್ಮನಾಗಿದ್ದಾರೆ. ಆದ್ರೆ, ಒಂದು ದಿನ ಅನುಷ್ಕಾ ಏಕಾಏಕಿ ಮನೆ ಬಿಟ್ಟು ಹೊಗಿದ್ದಾಳೆ.

ಅನುಷ್ಕಾ ಪೋಷಕರಾದ ಅರ್ಚನಾ ಮತ್ತು ಅಭಿಷೇಕ್ ಸಧ್ಯ ಅತೀವ ದುಃಖದಲ್ಲಿದ್ದಾರೆ. ಅಕ್ಟೋಬರ್ 21ರಂದು ತಾನು ಹೊರಗಡೆ ಧ್ಯಾನ ಮಾಡಲು ಹೋಗುವುದಾಗಿ ಹೊರಗೆ ಹೋಗುವುದಾಗಿ ಹೇಳಿ ಹೊರ ಹೋದ ಮಗಳು, ಎರಡು ಜೋಡಿ ಬಟ್ಟೆಗಳು, 2500 ನಗದುನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ. ಆ ನಂತರ ಅನುಷ್ಕಾ ಪತ್ತೆಯಾಗಿಲ್ಲ. ಇನ್ನು ಆಕೆಯ ಕೊರಗಿನಲ್ಲಿಯೇ ಅಜ್ಜ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾ ದುಃಖತಪ್ತರಾದ್ರು. ಪೋಷಕರು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಫಲಿತಾಂಶವಿಲ್ಲ. ಪೊಲೀಸರು ಈಗಾಗಲೇ ಅನುಷ್ಕಾಗಾಗಿ ಹುಡುಕಾಟದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

2022ರ ಮೊದಲ ಅಮಾವಾಸ್ಯೆಯಂದು ಈ ಶುಭಕೆಲಸ ಮಾಡಿ;

Sun Jan 2 , 2022
ನವದೆಹಲಿ: ಇಂದು(ಜ.1ರ ಶನಿವಾರ) 2022ರ ಮೊದಲ ಅಮಾವಾಸ್ಯೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಅಮವಾಸ್ಯೆಯು ಕೃಷ್ಣ ಪಕ್ಷದ 15ನೇ ದಿನದಂದು ಬರುತ್ತದೆ. ಪುಷ್ಯ ಅಮಾವಾಸ್ಯೆಗೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಪುಷ್ಯ ಅಮಾವಾಸ್ಯೆಯ ದಿನದ ದಾನಕ್ಕೆ ವಿಶೇಷ ಮಹತ್ವವಿದೆ. ಇದಲ್ಲದೇ ಇಂದು ಪಿತೃ ದೋಷ ಮತ್ತು ಕಾಲಸರ್ಪ ದೋಷವನ್ನು ತೊಡೆದುಹಾಕಲು ವಿಶೇಷ ದಿನವಾಗಿದೆ. ವರ್ಷದ ಮೊದಲ ಅಮಾವಾಸ್ಯೆಯಂದು […]

Advertisement

Wordpress Social Share Plugin powered by Ultimatelysocial