ಹೆಚ್​ಡಿ ಕುಮಾರಸ್ವಾಮಿ ಸ್ಲೋ ಪಾಯಿಸನ್: ಹೆಚ್​ಸಿ ಬಾಲಕೃಷ್ಣ ವಾಗ್ದಾಳಿ

ಹೆಚ್.​ಡಿ. ಕುಮಾರಸ್ವಾಮಿ ‌ಬಗ್ಗೆ ಬೇಸರವಿಲ್ಲ, ಅವರ ನಡುವಳಿಕೆ ಬಗ್ಗೆ ಬೇಸರ ಇದೆ. ಹೆಚ್​ಡಿಕೆ ನಾಯಕತ್ವವನ್ನು ದುರುಪಯೋಗ ‌ಪಡಿಸಿಕೊಂಡರು ಎಂದು ಬಿಡದಿಯಲ್ಲಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಲೋ ಪಾಯಿಸನ್.

ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ಈಗಾಗಲೇ ಹಲವು ಶಾಸಕರು ಜೆಡಿಎಸ್ ಪಕ್ಷ ಬಿಟ್ಟಿದ್ದಾರೆ. ಪುಟ್ಟರಾಜು, ಶಿವಲಿಂಗೇಗೌಡ ಸೇರಿ ಇನ್ನೂ ಹಲವರು ಬಿಡ್ತಾರೆ. ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರ ಏಳಿಗೆ ಸಹಿಸಲ್ಲ. ಪಕ್ಕದಲ್ಲಿರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ‌ತಾಲೂಕಿನ ಬಿಡದಿಯಲ್ಲಿ ಬಾಲಕೃಷ್ಣ ಮಾತನಾಡಿದ್ದಾರೆ.

ನನಗೆ ಟಿಕೆಟ್ ಕೊಟ್ಟು, ನನ್ನ ಸೋದರನನ್ನೇ ಸೋಲಿಸಿದರು. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಮ್ಮನನ್ನೇ ಸೋಲಿಸಿದರು. ನಾನೂ ಕೂಡ ಕುಮಾರಸ್ವಾಮಿಯಿಂದ ಚುಚ್ಚಿಸಿಕೊಂಡಿದ್ದೇನೆ. ಹೆಚ್.​ಡಿ. ಕುಮಾರಸ್ವಾಮಿ ‌ಬಗ್ಗೆ ಬೇಸರವಿಲ್ಲ, ಅವರ ನಡುವಳಿಕೆ ಬಗ್ಗೆ ಬೇಸರ ಇದೆ. ಹೆಚ್​ಡಿಕೆ ನಾಯಕತ್ವವನ್ನು ದುರುಪಯೋಗ ‌ಪಡಿಸಿಕೊಂಡರು ಎಂದು ಬಿಡದಿಯಲ್ಲಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಾತನಾಡಲು ಅವಕಾಶ ಕೊಡಿ: ಕಲಾಪ ಸರಿದಾರಿಗೆ ತರಲು ಸಭಾಧ್ಯಕ್ಷರು ಸುಸ್ತೋ ಸುಸ್ತು

Sun Dec 26 , 2021
  ಬೆಳಗಾವಿ: ವಿಧಾನಸಭೆಯಲ್ಲಿ ಬೆರಳೆಣಿಕೆ ಸದಸ್ಯರು. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಬೇಕೆಂದು ಅವಕಾಶ ಸಿಗದ ಸದಸ್ಯರ ಕೂಗಾಟ. ನಂಗೆ ಮೊದಲ ಅವಕಾಶ ಕೊಡಬೇಕೆಂದು ಸದಸ್ಯರ ಹಠ.. ಕಲಾಪ ಸರಿದಾರಿಗೆ ತರಲು ಸಭಾಧ್ಯಕ್ಷರು ಸುಸ್ತೋ ಸುಸ್ತು.. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕೊನೆಯ ದಿನ ಬೆರಳೆಣಿಕೆಯ ಸದಸ್ಯರು ಕಾಣಿಸಿಕೊಂಡರು. ಕೆಲವೊಂದಿಷ್ಟು ಸದಸ್ಯರು ರಜೆ ಪಡೆದುಕೊಂಡಿದ್ದರೆ, ಇನ್ನೊಂದಿಷ್ಟು ಶಾಸಕರು ಕಲಾಪದಿಂದ ದೂರ ಉಳಿದಿದ್ದರು. ಶುಕ್ರವಾರದ 10ನೇ ದಿನದ ಕಲಾಪದಲ್ಲಿ ಉತ್ತರ ಕರ್ನಾಟಕದ ಬಗ್ಗೆ […]

Advertisement

Wordpress Social Share Plugin powered by Ultimatelysocial