ಇತ್ತೀಚಿನ ಕೆಲ ದಿನಗಳಿಂದ ಚಳಿ ಸ್ವಲ್ಪ ಹೆಚ್ಚಾಗಿದೆ .

ತ್ತೀಚಿನ ಕೆಲ ದಿನಗಳಿಂದ ಚಳಿ ಸ್ವಲ್ಪ ಹೆಚ್ಚಾಗಿದೆ ಅಲ್ವಾ? ಭಾರತದಲ್ಲಿ ಕೋಲ್ಡ್‌ ವೇವ್‌ನ ಅಲರ್ಟ್ ಘೋಷಿಸಲಾಗಿದೆ. ಚಳಿಗಾಲದಲ್ಲಿ ಚಳಿ ಸಹಜ ಆದರೆ ತುಂಬಾ ಚಳಿಯಿದ್ದರೆ ಅಂಥ ಚಳಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು, ಏಕೆಂದರೆ ನಿರ್ಲಕ್ಷ್ಯ ಮಾಡಿದರೆ ಕಾಯಿಲೆ ಬರುವುದು.

ಚಳಿ ಹೆಚ್ಚಾದಾಗ ಮಕ್ಕಳ, ಗರ್ಭಿಣಿಯರ, ವಯಸ್ಸಾದವರ ಆರೋಗ್ಯದ ಬಗ್ಗೆ ತುಂಬಾನೇ ಗಮನಹರಿಸಬೇಕು. ಚಳಿ ಹೆಚ್ಚಾದಾಗ ಕಂಡು ಬರುವ ತೊಂದರೆಗಳೇನು? ಚಳಿಯಿಂದ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ವಾತಾವರಣದಲ್ಲಿ ಚಳಿ ಹೆಚ್ಚಾದಾಗ ಈ ಬಗೆಯ ಸಮಸ್ಯೆಗಳು ಕಂಡು ಬರುವುದು.

* ಕೆಮ್ಮು
* ಗಂಟಲು ಕೆರೆತ’* ಶೀತ
* ಮೈಕೈ ನೋವು
* ಜ್ವರ
* ಬೇಧಿ
* ಇದರ ಜೊತೆಗೆ ಕಫ
* ಎದೆ ನೀವು, ಅಸತಮಾ
* ಉಸಿರಾಟದಲ್ಲಿ ತೊಂದರೆ

ಚಳಿ ಹೆಚ್ಚಾದಾಗ ಯಾವ ಬಗೆಯ ಮುನ್ನೆಚ್ಚರಿಕೆವಹಿಸಬೇಕು?

* ಬಿಸಿ ನೀರಿನಲ್ಲಿ ಕೈ ತೊಳೆಯಿರಿ, ಕೈಗಳಿಗೆ ಚೆನ್ನಾಗಿ ಸೋಪು ಹಚ್ಚಿ, ಆಗಾಗ ತೊಳೆಯಿರಿ.
* ಮೂಗು, ಕಣ್ಣು ಹಾಗೂ ಬಾಯಿಯನ್ನು ಆಗಾಗ ಮುಟ್ಟಬೇಡಿ
* ಕೆಮ್ಮುವಾಗ, ಸೀನುವಾಗ ಕರ್ಚೀಫ್‌ ಅಥವಾ ಟಿಶ್ಯೂ ಅಡ್ಡ ಹಿಡಿಯಿರಿ
* ಒಬ್ಬರು ತಿಂದ ತಟ್ಟೆ ಅಥವಾ ಲೋಟ ತೊಳೆಯದೆ ಬಳಸಬೇಡಿ
* ಒಂದೇ ಟವಲ್‌ ಬಳಸಬೇಡಿ
* ಮನೆ ಹಾಗೂ ಕೆಲಸದ ಜಾಗವನ್ನು ಸ್ವಚ್ಛವಾಗಿಡಿ
* ಆರೊಗ್ಯಕರ ಆಹಾರಕ್ರಮ ಪಾಲಿಸಿ’
* ಪ್ರತಿದಿನ ವ್ಯಾಯಾಮ ಮಾಡಿ

ಚಳಿಗಾಲದಲ್ಲಿ ಮೈ ಬೆಚ್ಚಗಿರಿಸಿ

* ಸ್ಟೆಟರ್ ಧರಿಸಿ
* ಮಕ್ಕಳ ಮೈಯನ್ನುಬೆಚ್ಚಗಿಡುವ ಉಡುಪುಗಳನ್ನು ಧರಿಸಿ
* ಗರ್ಭಿಣಿಯರು ಮೈಯನ್ನು ಬೆಚ್ಚಗಿಡಬೇಕು.
* ಬಿಸಿ ಬಿಸಿ ಆಹಾರ ಸೇವಿಸಿ
* ಆಗಷ್ಟೇ ತಯಾರಿಸಿದ ಆಹಾರ ತಯಾರಿಸಿ. ನೆನ್ನೆಯ ಆಹಾರ ಬಿಸಿ ಮಾಡಿ ಸೇವಿಸಬೇಡಿ.
* ಬಿಸಿ ಬಿಸಿ ನೀರು ಕುಡಿಯಿರಿ.

ಈ ಬಗೆಯ ಪಾನೀಯ ಸೇವಿಸಿ.

ಸೂಪ್‌ ಕುಡಿಯಿರಿ
ಚಳಿಗಾಲದಲ್ಲಿ ಸೂಪ್ ಕುಡಿಯುವುದು ತುಂಬಾ ಒಳ್ಳೆಯದು. ವೆಜ್ ಹಾಗೂ ನಾನ್‌ವೆಜ್‌ ಸೂಪ್‌ ಬಳಸಬಹುದು. ಸೂಪ್‌ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು

ತುಳಸಿ ನೀರು
ಕುಡಿಯುವ ನೀರಿಗೆ 3-4 ಎಸಲು ತುಳಸಿ ಹಾಕಿ ಆ ನೀರನ್ನು ಕುದಿಸಿ ಕುಡಿದರೆ ಒಳ್ಳೆಯದು.

ಮಸಾಲೆ ಟೀ
ಚಳಿಗಾಲದಲ್ಲಿ ಶುಂಠಿ ಟೀ ಕುಡಿಯಿರಿ.

ಗಿಡ ಮೂಲಿಕೆ ಬಳಸಿ
ಗಿಡಮೂಲಿಕೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯಿರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮ.

Mon Jan 16 , 2023
ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾರತ ದೇಶದ ಅನೇಕ ರಾಜ್ಯಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಲಾತಂಡಗಳನ್ನು ವಿಮಾನ ನಿಲ್ದಾಣದಲ್ಲಿ ಜಾನಪದ ನೆರಳು ಸಂಶೋಧನಾ ಕೇಂದ್ರದ ಸಾಲಿಯಾನ್ ಸಂತೋಷ್ ರವರ ತಂಡ ಉತ್ತರ ಕರ್ನಾಟಕ ಶೈಲಿಯಲ್ಲಿ ಜೋಗತಿ ನೃತ್ಯ, ಕಂಸಾಳೆ ಕಲೆಯ ಮೂಲಕ ಹಾಗೂ ದ್ಯಾಮಣ್ಣ ಲಮಾಣಿ ತಂಡ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು. ಕಲಾವಿದರಾಗಿ ಜ್ಯೋತಿ ಮಡಿವಾಲರ್, ಸಹನಾ ಬಣ್ಣಗ್ಗಿ, ಮಂಜುನಾಥ್ ಬರ್ಕೆರ್, ಸಾಲಿಯಾನ್ ಸಂತೋಷ್ […]

Advertisement

Wordpress Social Share Plugin powered by Ultimatelysocial