ನಾಯಕ,ನಾಯಕಿ‌,ನಿರ್ದೇಶಕರ ಗೈರು ಪಿಸು ಮಾತು ಅಮಾವರಣ

 

ಕ್ಷಣಕ್ಷಣಕ್ಕೂ, ಕುತೂಹಲ, ನಿರೀಕ್ಷಿಸಲಾರದ ತಿರುವು, ನೋಡುಗರನ್ನು ನಿಬ್ಬೆರಗಾಗಿಸುವ  ಸನ್ನಿವೇಶ ಹೊಂದಿರುವ  ಕಥೆಯನ್ನು ಹಿರಿಯ ನಿರ್ದೇಶಕ ಎಸ್. ನಾರಾಯಣ್ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.ಸೂರ್ಯವಂಶ ಧಾರಾವಾಹಿಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಎಸ್. ನಾರಾಯಣ್, ಥಾಯ್ ಲೆಂಡ್ ನಿಂದ ಬಂದು ಜ್ವರ,ಕೆಮ್ಮಿಗೆ ಒಳಗಾಗಿದ್ದ ನಟ ಆದಿತ್ಯ, ಹನಿಮೂನ್ ಗೆ ಹೋಗುವ ಆತುರದಲ್ಲಿದ್ದ ನಟಿ ಅದಿತಿ ಪ್ರಭುದೇವ ಗೈರು ಹಾಜರಿಯಲ್ಲಿ  “ಪಿಸು ಪಿಸು” ಮಾತು ಹಾಗೂ ಅಮ್ಮ  ಲಿರಿಕಲ್ ಹಾಡನ್ನು ವಾಣಿಜ್ಯ ಮಂಡಳಿ  ಅಧ್ಯಕ್ಷ ಬಾಮ ಹರೀಶ್  ಬಿಡುಗಡೆ ಮಾಡಿ ಶುಭಹಾರೈಸಿದರು.ನಿರ್ದೇಶಕ  ಎಸ್.ನಾರಾಯಣ್ ಬಹಳ ದಿನಗಳ ನಂತರ ನಿರ್ದೇಶಕರ  ಕ್ಯಾಪ್ ತೊಟ್ಟಿರುವ   “5ಡಿ” ಚಿತ್ರಕ್ಕೆ ಸ್ವಾತಿ ಕುಮಾರ್ ಬಂಡವಾಳ ಹಾಕಿದ್ದಾರೆ.ಈ ವೇಳೆ ಅವರು ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮ್ಮನ ಹಾಡು ತೆರೆಮೇಲೆ ನೋಡಿದಾಗ  ಕಣ್ಣು ತುಂಬಿಬಂತು. ಜೊತೆಗೆ ರೊಮ್ಯಾಂಟಿಕ್ ಹಾಡು ಅದ್ಭುತವಾಗಿದೆ.5ಡಿ  ಮನಂಜನಾತ್ಮಕ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಎಲ್ಲಾ ಅಂಶಗಳಿವೆ ಎಂದರು.ಕಾರ್ಯಕಾರಿ ನಿರ್ಮಾಪಕ ಕುಮಾರ್ ಮಾತನಾಡಿ ಸಿನಿಮಾ ಆರಂಭಿಸಿದಾಗ  ನಕಾರತ್ಮಕ ಪ್ರತಿಕ್ರಿಯೆ ಬಂದವು, ನಾರಾಯಣ್  ಈ ರೀತಿಯ  ಸಿನಿಮಾ ಮಾಡಲ್ಲ , ಆದಿತ್ಯನನ್ನು ಹಾಕಿಕೊಂಡು ಚಿತ್ರ ಮಾಡಿದರೆ ಗೆಲ್ಲೋದಿಲ್ಲ ಅಂದರು ಯಾವುದಕ್ಕು ತಲೆ‌ ಕೆಡಿಸಿಕೊಳ್ಳದೆ ಚಿತ್ರ ಮಾಡಿದ್ದೇವೆ .ರಕ್ತದಾನ ಮಾಡುವುದು ಸರೀನಾ, ತಪ್ಪಾ  ಎನ್ನುವುದರ ಮೇಲೆ ಈ ಚಿತ್ರ ನಿಂತಿದೆ.  ಬ್ಲಡ್ ಮಾಫಿಯಾ ನಡೆಯುತ್ತಿದೆ. ಅದು ಹೇಗೆ, ಯಾರು ಈ ಮಾಡುತ್ತಿರುವವರು ಎನ್ನುವುದೇ ಚಿತ್ರದ ಮುಖ್ಯವಸ್ತು.ತಿಂಗಳಾಂತ್ಯಕ್ಕೆ ಟ್ರೈಲರ್ ಬಿಡುಗಡೆ ನಡೆಯಲಿದೆ. ನಾರಾಯಣ್ ಸೇರಿದಂತೆ ನಾಯಕ, ನಾಯಕಿ ಎಲ್ಲರೂ ಹಾಜರಿರುತ್ತಾರೆ ಎಂದರು.  ಕಲಾವಿದರಾದ ರತನ್ ರಾಮ್, ರಾಜೇಶ್, ಛಾಯಾಗ್ರಾಹಕ ಕುಮಾರ್‌ಗೌಡ, ವಿತರಕ ರಾಧಾಕೃಷ್ಣ  ಚಿತ್ರದ ಕುರಿತಂತೆ ಮಾತನಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವೂದ ಇಬ್ರಾಹಿಂ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ.

Wed Jan 18 , 2023
ನವದೆಹಲಿ – ಅಂತರರಾಷ್ಟ್ರೀಯ ಭಯೋತ್ಪಾದಕ ಮತ್ತು ಮುಂಬಯಿನ 1993 ರಂದು ನಡೆದ ಬಾಂಬ ಸ್ಫೋಟದ ಮುಖ್ಯ ಸೂತ್ರಧಾರ ದಾವೂದ ಇಬ್ರಾಹಿಂ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ. ಅವನ ಎರಡನೇ ಪತ್ನಿ ಪಾಕಿಸ್ತಾನದ ಪಠಾಣ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ದಾವೂದನ ಸಹೋದರಿ ಹಸೀನಾ ಪಾರ್ಕರ ಇವಳ ಪುತ್ರ ಅಲಿಶಾಹ ಕಳೆದ ವರ್ಷ ಸಪ್ಟೆಂಬರ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.ಗೆ) ನೀಡಿರುವ ಉತ್ತರದಲ್ಲಿ ಹೇಳಿರುವುದಾಗಿ ಈಗ ಬಹಿರಂಗವಾಗಿದೆ. ೧. ಎನ್.ಐ.ಎ. ಮುಂಬಯಿಯಲ್ಲಿ ಕೆಲವು ತಿಂಗಳುಗಳ ಹಿಂದೆ ದಾಳಿ […]

Advertisement

Wordpress Social Share Plugin powered by Ultimatelysocial