ನಟ ಯಶ್ ಹಾದಿಯಲ್ಲಿ ಚಂದು.

ದಶಕದಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ನಟ,ನಿರ್ದೇಶಕ ಅಲೆನ್ ಚಂದು ಇದೀಗ ಒಂದರ ಹಿಂದೆ ಒಂದು ಸಿನಿಮಾ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಗರಡಿಯಲ್ಲಿ ಪಳಗಿರುವ ಚಂದು, ಓಂಪ್ರಕಾಶ್ ಸೇರಿದಂತೆ ಹಿರಿ ಕಿರಿಯ ಕಲಾವಿದರು ಕಾಣಿಸಿಕೊಂಡಿರುವ “ಲವ್ ಬಾಬಾ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ಧಾರೆ. ಜೊತೆಗೆ ತಾವೇ ನಾಯಕನಾಗಿ ನಿರ್ದೇಶಕನಾಗಿ ಕಾಣಿಸಿಕೊಳ್ಳಲಿರುವ “ ದುರಂತ” ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ.ದುರಂತ ಚಿತ್ರ ಹಾರರ್ ಜಾನರ್ ಕಥೆಯನ್ನು ಒಳಗೊಂಡಿಡ್ಡು ಮೈಸೂರು ಸುತ್ತ ಮುತ್ತ 50 ದಿನಗಳ ಕಾಲ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ.ಇದಕ್ಕಾಗಿ ಅಂತಿಮ ಹಂತದ ಸಿದ್ದತೆ ನಡೆಸಿದ್ದಾರೆ ಅಲೆನ್ ಚಂದು.ಲವ್ ಬಾಬ ಚಿತ್ರದಲ್ಲಿ ಲವ್ ಮತ್ತು ಕಾಮಿಡಿ ಚಿತ್ರವಾಗಿದ್ದು ಓಂಪ್ರಕಾಶ್ ರಾವ್, ಅಭಿಲಾಷ್, ಕಾವ್ಯ ಸಾರಿಕಾ ಗೌಡ ಮತ್ತಿತರು ಕಾಣಿಸಿಕೊಂಡಿದ್ದಾರೆ.ಮೈಸೂರು, ಮಂಗಳೂರು, ಹೊನ್ನಾವರ  ಸೇರಿದಂತೆ ಮತ್ತಿತರ ಕಡೆ 48 ದಿನಗಳ ಕಾಲ ಚಿತ್ರೀಕಣ ಮಾಡಲಾಗಿದೆ ಎಂದರು.ಮಳೆಗಾಲ,ಮುಕುಂದ,ಜ್ವಾಲೆ ಮತ್ತು ಬೆಂಕಿ ಚಿತ್ರಗಳು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿಹೊಸ ಚಿತ್ರ ಕೈಗೆತ್ತಿಕೊಳ್ಳಲು ಸಿದ್ದತೆ ನಡೆದಿದೆ.ರಾಕಿಂಗ್ ಸ್ಟಾರ್ ಯಶ್ ಹಾದಿಯಲ್ಲಿ ಸಾಗಿರುವ ಅಲೆನ್ ಚಂದು ಅವರ ರೀತಿ ದೊಡ್ಡ ನಾಯಕನಾಗಬೇಕು ಎನ್ನುವ ಕನಸು ಕಂಡಿದ್ದಾರೆ. ಜೊತೆಗೆ ಒಟಿಟಿ ಮೂಲಕ ಕನ್ನಡ ಸಿನಿಮಾ ವಿತರಣೆ ಮಾಡುವುದು ಸೇರಿದಂತೆ ಹಾಲಿವುಡ್ ಶೈಲಿಯ ಚಿತ್ರಗಳನ್ನು ಕನ್ನಡಕ್ಕೆ ಪರಿಚಯ ಮಾಡಬೇಕು ಎನ್ನುವ ಉದ್ದೇಶವೊಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಠಕ್ಕರ್ ಬಳಿಕ ಧರಣಿ ಮನೋಜ್ ಹೊಸ ಅವತಾರ.

Mon Jan 30 , 2023
ಟಕ್ಕರ್ ಚಿತ್ರದ ಮೂಲಕ ನಾಯಕನಾಗಿ  ಪರಿಚಯವಾದ ನಟ  ಮನೋಜ್.  ವಿಭಿನ್ನ ಜಾನರಿನ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಅದುವೇ ಧರಣಿ. ಮನೋಜ್ ಹುಟ್ಟು ಹಬ್ಬದ ಪ್ರಯುಕ್ತ ‘ಧರಣಿ’ ಫಸ್ಟ್ ಲುಕ್ ಲೋಕಾರ್ಪಣೆಗೊಂಡಿದೆ.ಈ ಕುರಿತು ಮಾಹಿತಿ ಹಂಚಿಕೊಂಡ ಮನೋಜ್, ಲುಕ್  ಬೇರೆಯದ್ದೇ ರೀತಿಯಲ್ಲಿ ನೋಡಬಹುದು. ಕಟೆಂಟ್ ಇರುವ ಚಿತ್ರಗಳನ್ನು ಜನ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರಣಿ ಹೊಸ ವಿಚಾರಗಳ ಸುತ್ತ ಆವರಿಸಿಕೊಂಡಿದೆ. ಕಮರ್ಷಿಯಲ್ ಆಗಿ ರೂಪಿಸುತ್ತಿದ್ದೇವೆ ಎಂದರು ನಿರ್ದೇಶಕ ಸುಧೀರ್ […]

Advertisement

Wordpress Social Share Plugin powered by Ultimatelysocial