ನವದೆಹಲಿ: ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಗ್ರೂಪ್ ಒಡೆತನದ ಎ-320ನಿಯೋ ಏರ್ ಇಂಡಿಯಾ ವಿಮಾನದ ಇಂಜಿನ್ ಹಾರಾಟದ ಸಂದರ್ಭದಲ್ಲಿಯೇ ‘ಆಫ್’ ಆಗಿರುವ ಘಟನೆ ನಡೆದಿದೆ.
ಹಾರಾಟದ ಸಮಯದಲ್ಲಿ ಇಂಜಿನ್ ಆಫ್ ಆಗಿದೆ. ವಿಮಾನವು ಟೇಕ್ ಆಫ್ ಆದ 27 ನಿಮಿಷದಲ್ಲಿ ಇಂಜಿನ್ ಸ್ಥಗಿತವಾಗಿದ್ದರಿಂದ ಮರಳಿ ಮುಂಬೈ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಬೆಳಗ್ಗೆ 9.43ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿತ್ತು. ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಂಜಿನ್ ಸ್ಥಗಿತವಾಗಿದೆ.
ಕೂಡಲೇ ಪೈಲಟ್ ವಿಮಾನವನ್ನು ಮುಂಬೈ ಏರ್ಪೋರ್ಟ್ನಲ್ಲೇ 10.10ರ ಸಮಯಕ್ಕೆ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.ಈ ಘಟನೆಯ ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆ ತರಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada