ಪತಿ ವಿಘ್ನೇಶ್ ಶಿವನ್‌ಗಾಗಿ ರೂಲ್ಸ್ ಬ್ರೇಕ್ ಮಾಡಿದ ನಟಿ ನಯನತಾರಾ!

 

ನಟಿ ನಯನತಾರಾ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 20 ವರ್ಷಗಳಾಗುತ್ತಿವೆ. ಅದರಲ್ಲೂ ಕಳೆದ ವರ್ಷಗಳಲ್ಲಿ ಅವರಿಗೆ ಬೇರೆಯದೇ ಮನ್ನಣೆ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಅವರನ್ನು ‘ಲೇಡಿ ಸೂಪರ್ ಸ್ಟಾರ್‌’ ಎಂದೇ ಕರೆಯುತ್ತಾರೆ. ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಕೆಲ ವರ್ಷಗಳಿಂದೀಚೆಗೆ ಅವರು ಒಂದು ನಿಮಯವನ್ನು ಹಾಕಿಕೊಂಡಿದ್ದರು. ಅದನ್ನು ಅವರು ಬಹಳ ಮುತುವರ್ಜಿಯಿಂದ ಪಾಲಿಸುತ್ತಿದ್ದರು. ಆದರೆ ಇದೀಗ ಅದನ್ನು ಅವರು ಬ್ರೇಕ್ ಮಾಡಿದ್ದಾರೆ. ಏನದು ರೂಲ್ಸ್? ಪ್ರಚಾರ! ಹೌದು, ತಾವು ನಟಿಸುವ ಯಾವುದೇ ಸಿನಿಮಾಗಳ ಪ್ರಚಾರಕ್ಕೂ ನಯನತಾರಾ ಬರುತ್ತಿರಲಿಲ್ಲ. ಅದು ಎಂಥದ್ದೇ ಸ್ಟಾರ್ ಸಿನಿಮಾ ಆಗಿದ್ದರೂ, ನಯನತಾರಾ ಮಾತ್ರ ಪ್ರಚಾರಕ್ಕಾಗಲಿ, ಪ್ರೆಸ್‌ಮೀಟ್‌ಗಾಗಲಿ ಬರುತ್ತಿರಲಿಲ್ಲ. ಆದರೆ ಈ ರೂಲ್ಸ್ ಅನ್ನು ಅವರು ಪತಿ ವಿಘ್ನೇಶ್‌ ಶಿವನ್‌ಗಾಗಿ ಬ್ರೇಕ್ ಮಾಡಿದ್ದಾರೆ!ವಿಘ್ನೇಶ್‌ ಶಿವನ್‌ ನಿರ್ಮಾಣದ ‘ಕನೆಕ್ಟ್‌’
ನಯನತಾರಾ ಪತಿ ವಿಘ್ನೇಶ್‌ ಶಿವನ್‌ ಈಗ ‘ಕನೆಕ್ಟ್‌’ ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ಜೊತೆಗೆ ಸತ್ಯರಾಜ್ ಮತ್ತು ಅನುಪಮ್ ಖೇರ್ ಕೂಡ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿಯೂ ‘ಕನೆಕ್ಟ್’ ಸಿನಿಮಾ ಡಿ.22ರಂದು ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರದಲ್ಲಿ ನಯನತಾರಾ ಸಖತ್ ಬ್ಯುಸಿ ಆಗಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಎದುರು ಅವರು ಬಂದಿದ್ದಾರೆ. ಪ್ರೆಸ್‌ಮೀಟ್‌ಗೆ ಹಾಜರಾಗಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ‘ಕನೆಕ್ಟ್’ ಸಿನಿಮಾ ಪ್ರೀಮಿಯರ್‌ ಶೋಗೆ ಅವರು ಬಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಹಸಿರು ವಲಯ ಹಾಗೂರೈತರ ಜಮೀನುಗಳನ್ನು ಕೈಗಾರಿಕಾ ಪ್ರದೇಶ ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರೈತರು ದಿಕ್ಕಾರದ ಘೋಷಣೆ

Thu Dec 22 , 2022
ಹಸಿರು ವಲಯ ಹಾಗೂರೈತರ ಜಮೀನುಗಳನ್ನು ಕೈಗಾರಿಕಾ ಪ್ರದೇಶ ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರೈತರು ದಿಕ್ಕಾರದ ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಂಜನಗೂಡು ತಾಲ್ಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತರ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ. ಅದರೆ, ರೈತರು ನಾವು ಭೂಮಿಯನ್ನು ನಂಬಿ ಬದುಕುತ್ತೆವೆ ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ದಾರಿಕಾ ಪ್ರದೇಶಕ್ಕೆನೀಡುವುದಿಲ್ಲ. ನಮ್ಮ ಗ್ರಾಮಕ್ಕೆ ಯಾವುದೇ […]

Advertisement

Wordpress Social Share Plugin powered by Ultimatelysocial