ಪರೀಕ್ಷೆಗಳು ಇವತ್ತು ನಿನ್ನೆಯದಲ್ಲಾ,ಎಲ್ಲಾ ಕಾಲದಲ್ಲೂ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಅನ್ನೋದು ಈಗ ಹೊರಗೆ ಬರ್ತಿದೆ..
ನನಗೆ ಒಂದು ಸಣ್ಣ ಸಾಕ್ಷ್ಯ ಸಿಕ್ಕಿದ ತಕ್ಷಣ ಕೇವಲ ಎರಡು ಗಂಟೆಯಲ್ಲಿ ಸಿಎಂ ಒಪ್ಪಿಗೆ ಪಡೆದು ತನಿಖೆ ಆರಂಭಿಸಿದೆ…
ಸಿಒಡಿ ವಿಶೇಷ ತಂಡ ರಚನೆ ಮಾಡಿ,ತುರ್ತಾಗಿ ತನಿಖೆ ಮಾಡುವಂತೆ ಆದೇಶಿಸಿದೆ..
ತನಿಖೆ ಯಾವ ರೀತಿಯ ಪ್ರಗತಿಯಲ್ಲಿದೆ ಅನ್ನುವ ಪ್ರತಿಕ್ಷಣದ ಮಾಹಿತಿ ಮಾಧ್ಯಮದಲ್ಲಿ ಬರ್ತಿದೆ..
ಪರೀಕ್ಷೆಯಲ್ಲಿ ಭ್ರಷ್ಟಾಚಾರ ಹೊಸದೇನಲ್ಲಾ.ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನಾಲ್ಕು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಯ್ತು..
ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು.ಕಾಂಗ್ರೆಸ್ ಆರೋಪ ಮಾಡುವ ಮೊದಲು ತಮ್ಮ ಅವಧಿಯನ್ನ ನೆನಪುಮಾಡಿಕೊಳ್ಳಬೇಕು..
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ ಮುಂದಕ್ಕೆ ಹೋಗಲೇ ಇಲ್ಲಾ.
ಆದರೆ ನಾವು ಪಕ್ಷ ಪಂಗಡ ನೋಡದೇನೆ ಅರೆಸ್ಟ್ ಮಾಡಿದ್ದೇವೆ.
ಇನ್ನು ಮುಂದೆ ಅಕ್ರಮ ಮಾಡುವವರಿಗೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದ್ದೇವೆ.
ಅಕ್ರಮ ನಡೆದಿಲ್ಲಾ ಎಂದು ಪರಿಷತ್ ನಲ್ಲಿ ನಾನು ಉತ್ತರ ಕೊಟ್ಟರೋದು ನಿಜ.
ಆಗ ನನಗೆ ಯಾವುದೇ ದಾಖಲಾತಿ ಸಿಕ್ಕಿರಲಿಲ್ಲಾ.ಯಾರೋ ಹೇಳ್ತಾರೆ ಅನ್ನೋ ಕಾರಣಕ್ಕೆ ಹೇಳೋಕ್ಕಾಗಲ್ಲಾ.
ಯಾವಾಗ ನನಗೆ ಸಣ್ಣ ಎವಿಡೆನ್ಸ್ ಸಿಕ್ತೋ ಆವಾಗ ನಾನು ತಕ್ಷಣ ತನಿಖೆಗೆ ಆದೇಶಿಸಿದೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada