HIJAB:ಹಿಜಾಬ್​ ವಿಚಾರಣೆ ಮತ್ತೆ ಮುಂದೂಡಿಕೆ;

ಬೆಂಗಳೂರು: ಹೈಕೋರ್ಟ್​ ಮೆಟ್ಟಿಲೇರಿರುವ ಹಿಜಾದ್ ವಿವಾದ ಪ್ರಕರಣದ ಮತ್ತೆ ಮುಂದೂಡಲ್ಪಟ್ಟಿದ್ದು, ನಾಳೆಯ ಬೆಳವಣಿಗೆಯತ್ತ ಎಲ್ಲರ ಗಮನ ನೆಟ್ಟಿದೆ.

ಪ್ರಕರಣ ಹೈಕೋರ್ಟ್​​ನಲ್ಲಿದ್ದರೂ ರಾಜ್ಯಾದ್ಯಂತ ಹಿಜಾಬ್​ ವಿವಾದದ ಬಿಸಿ ತಗ್ಗಿಲ್ಲ.

ಅಲ್ಲಲ್ಲಿ ಹಿಜಾಬ್​-ಕೇಸರಿ ಸಂಘರ್ಷ ಮುಂದುವರಿದಿದೆ. ಇನ್ನೊಂದೆಡೆ ಹೈಕೋರ್ಟ್​ ಸೂಚನೆಯಂತೆ ನಾಳೆ ರಾಜ್ಯದ ಎಲ್ಲ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಪುನರಾರಂಭಗೊಳ್ಳಬೇಕಿದೆ.

ಮತ್ತೊಂದೆಡೆ ಇಂದು ಹಿಜಾಬ್​ ಕುರಿತ ವಿವಾದದ ವಿಚಾರಣೆ ನಾಳೆಗೆ ಮತ್ತೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿನ ಹಿಜಾಬ್​-ಕೇಸರಿ ಸಂಘರ್ಷದ ಪರಿಸ್ಥಿತಿ ಹೇಗಿರಲಿದೆ ಎಂಬತ್ತ ಸಾರ್ವಜನಿಕರು ಕೌತುಕದಿಂದ ನೋಡುವಂತಾಗಿದೆ.

ಹಿಜಾಬ್​ ಧರಿಸಿ ತರಗತಿ ಹಾಜರಾಗಲು ಉಂಟಾಗಿರುವ ಅಡ್ಡಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಕೈಗೊಂಡಿದ್ದು, ಬುಧವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

REVIEW:ಬದಾಯಿ ಡು ರಿವ್ಯೂ;

Tue Feb 15 , 2022
ಬಧಾಯಿ ದೋ ಎಂಬುದು ಸಲಿಂಗಕಾಮಿ ದಂಪತಿಗಳು ಲ್ಯಾವೆಂಡರ್ ಮದುವೆಗೆ ಪ್ರವೇಶಿಸುವ ಕಥೆಯಾಗಿದೆ. ಶಾರ್ದೂಲ್ ಠಾಕೂರ್ (ರಾಜ್‌ಕುಮಾರ್ ರಾವ್) ಡೆಹ್ರಾಡೂನ್‌ನಲ್ಲಿ ಒಬ್ಬ ಪೋಲೀಸ್. ಅವನು ತನ್ನ ಸಂಪ್ರದಾಯವಾದಿ ಕುಟುಂಬದೊಂದಿಗೆ ಇರುತ್ತಾನೆ. ಅವರು ಕ್ಲೋಸೆಟ್ ಸಲಿಂಗಕಾಮಿ ವ್ಯಕ್ತಿ ಮತ್ತು ಅವರು ತಮ್ಮ ಕುಟುಂಬಕ್ಕೆ ಈ ಸತ್ಯವನ್ನು ಬಹಿರಂಗಪಡಿಸಿಲ್ಲ. ಆತನಿಗೆ 32 ವರ್ಷ ಮತ್ತು ಆತನ ಮನೆಯವರು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ. ಏತನ್ಮಧ್ಯೆ, ಸುಮನ್ ಸಿಂಗ್ (ಭೂಮಿ ಪೆಡ್ನೇಕರ್), ದೈಹಿಕ ಶಿಕ್ಷಣ ಶಿಕ್ಷಕ, ಮತ್ತು […]

Advertisement

Wordpress Social Share Plugin powered by Ultimatelysocial