ಉಡುಪಿ : ಹಿಜಾಬ್ ವಿವಾದವನ್ನ ದೊಡ್ಡ ಮಟ್ಟದಲ್ಲಿ ಬೆಳೆಸಲು ರಾಷ್ಟ್ರ ಮಟ್ಟದಲ್ಲಿ ಷಡ್ಯಂತ್ರ ನಡೆಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಅರೋಪಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು, ‘ಸರ್ಕಾರ ಈ ಬಗ್ಗೆ ಗುಪ್ತವಾಗಿ ತನಿಖೆ ಆರಂಭಿಸಿದ್ದು,ಎಸ್ಡಿಪಿಐ, ಸಿಎಫ್ಐ, ಪಿಎಫ್ಐ ಇರುವುದು ದೃಢಪಟ್ಟಿದೆ.
ಇವ್ರು ಮೊದಲು ಮಣಿಪಾಲದ ಗುಪ್ತಸ್ಥಳದಲ್ಲಿ 12 ಹುಡುಗಿಯರಿಗೆ ತರಬೇತಿ ಕೊಟ್ಟಿದ್ದು, ಪ್ರಚೋದನೆ ಮಾಡಿದ್ದಾರೆ. ಸತತ ಪ್ರವಚನಗಳ ಮೂಲಕ ಹಿಂದೂ ಹೆಣ್ಣುಮಕ್ಕಳನ್ನ ನೋಡಿದ್ರೆ ಆಕ್ರೋಶ ಬರುವ ಮನಃಸ್ಥಿತಿ ರೂಪಿಸಿದ್ದಾರೆ. ಇಂಥದ್ದೊಂದು ತರಬೇತಿಯಲ್ಲಿ ಪಾಲ್ಗೊಂಡಿದ್ದ ಹುಡುಗಿಯೇ ಮಾಹಿತಿ ನೀಡಿದ್ದಾಳೆ. ಇನ್ನು ಈ ತರಬೇತಿಯ ನಂತರವೇ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada