21 ಗುಂಟೆ ಜಮೀನಿಗಾಗಿ ತಾಯಿ ಜೊತೆ ಸೇರಿಕೊಂಡು ಮಕ್ಕಳು ತಂದೆಯನ್ನೇ ಕೊಂದರು.

 

21 ಗುಂಟೆ ಜಮೀನಿಗಾಗಿ ತಾಯಿ ಜೊತೆ ಸೇರಿಕೊಂಡು ಮಕ್ಕಳು ತಂದೆಯನ್ನೇ ಕೊಂದು ಸುಟ್ಟು ಹಾಕಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.ಕೊರಟಗೆರೆ ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಚನ್ನಿಗರಾಯಪ್ಪ ಪತ್ನಿ ಯಶೋಧ, ಪುತ್ರರಾದ ನಿಖಿಲ್, ಮಂಜುನಾಥ್, ವಿಶ್ವಾಸ್ ತಂದೆಯನ್ನೇ ಕೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ಮಕ್ಕಳ ಜೊತೆ ಸೇರಿಕೊಂಡು ಪತಿಯನ್ನೇ ಕಿಡ್ನ್ಯಾಪ್ ಮಾಡಿದ ಪತ್ನಿ ಯಶೋಧ ಇರಿದು ಕೊಲೆ ಮಾಡಿದ್ದಾಳೆ.ಎರಡು ‌ಮದುವೆ ಆಗಿದ್ದ ಕೊಲೆಯಾದ ಚನ್ನಿಗರಾಯಪ್ಪ ಆಸ್ತಿ ಹಂಚಿಕೆ ಮಾಡುವ ವೇಳೆ 21 ಜಮೀನು ವಿವಾದವಾಗಿತ್ತು. ಇದೇ ವಿಚಾರಕ್ಕೆ ಗಲಾಟೆ ನಡೆದು ಪತಿ ಚನ್ನಿಗರಾಯಪ್ಪ ನ‌ನ್ನು ಪತ್ನಿ ಮಕ್ಕಳಿಂದಲೇ ಕಿಡ್ನಾಪ್ ಮಾಡಿಸಿದ್ದಳು.ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಕೈ ಕಾಲು ಕಟ್ಟಿ ಯಶೋಧ 22 ಬಾರಿ ಇರಿದು ಹತ್ಯೆ ಮಾಡಿದ್ದಾಳೆ. ಹತ್ಯೆಯ ಬಳಿಕ ಗುರುತು ಪತ್ತೆ ಮಾಡದಂತೆ ಬೆಂಕಿ ಹಾಕಿ ಸುಟ್ಟುಹಾಕಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ತನಿಖೆ ನಡೆಸಿ ಪತ್ನಿ ಹಾಗೂ ಮಕ್ಕಳನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮರಾವತಿಯ ಲ್ಯಾಬ್ ಟೆಕ್ನಿಷಿಯನ್ ಕೋವಿಡ್ ಪರೀಕ್ಷೆಗಾಗಿ ಮಹಿಳೆಯ ಖಾಸಗಿ ಭಾಗಗಳಿಂದ ಸ್ವ್ಯಾಬ್ ತೆಗೆದುಕೊಂಡ 10-ವರ್ಷದ RI ಅನ್ನು ಪಡೆಯುತ್ತಾರೆ

Thu Feb 3 , 2022
ಮಹಾರಾಷ್ಟ್ರದ ಅಮರಾವತಿಯ ಲ್ಯಾಬ್ ಟೆಕ್ನಿಷಿಯನ್, ಕೋವಿಡ್ -19 ಪರೀಕ್ಷೆಗೆ ಎಂದು ನಟಿಸಿ ಮಹಿಳೆಯ ಖಾಸಗಿ ಅಂಗಗಳಿಂದ ಸ್ವ್ಯಾಬ್ ಮಾದರಿಯನ್ನು ತೆಗೆದುಕೊಂಡಿದ್ದಕ್ಕಾಗಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ಥಳೀಯ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿತು ಮತ್ತು 17 ತಿಂಗಳ ನಂತರ ಶಿಕ್ಷೆಯನ್ನು ಪ್ರಕಟಿಸಿತು. ಈ ವ್ಯಕ್ತಿಯನ್ನು ಜುಲೈ 30, 2020 ರಂದು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಯಿತು. ಕೋವಿಡ್-19 ಪರೀಕ್ಷೆಗಳಿಗೆ ಸ್ವ್ಯಾಬ್ ಮಾದರಿಗಳನ್ನು ವ್ಯಕ್ತಿಯ ಮೂಗು ಮತ್ತು ಗಂಟಲಿನಿಂದ […]

Advertisement

Wordpress Social Share Plugin powered by Ultimatelysocial