ಸಂಕ್ರಾಂತಿಗೆ ಲಕ್ಷುರಿ ಕಾರುಗಳ ಉಡುಗೊರೆ! ಉದ್ಯೋಗಿಗಳಿಗೆ ಬಂಪರ್​ ಬೋನಸ್​ ಕೊಟ್ಟ ಹೈದರಾಬಾದ್​ ಕಂಪನಿ.

ಹೈದರಾಬಾದ್​: ಹೆಚ್ಚಿನ ಕಂಪನಿ ಮಾಲೀಕರು ಕೆಲವು ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಬೋನಸ್ ಘೋಷಿಸುತ್ತಾರೆ. ಇನ್ನು ಕೆಲವು ಸಂಸ್ಥೆಗಳು ಹಬ್ಬ ಹರಿದಿನಗಳಿಗೆ ಉಡುಗೊರೆ ನೀಡಿ ಉದ್ಯೋಗಿಗಳನ್ನು ಸಂತಸಪಡಿಸುತ್ತಾರೆ. ಈ ಮೂಲಕ ಲಾಭದಲ್ಲಿ ಉದ್ಯೋಗಿಗಳಿಗೂ ಪಾಲು ನೀಡಲಾಗುತ್ತದೆ.

ಇದೀಗ ಸಂಕ್ರಾಂತಿ ಹಿನ್ನೆಲೆಯಲ್ಲಿ ಹೈದರಾಬಾದ್​ ಮೂಲದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಈ ಮುಂಚಿನಿಂದಲೂ ಸೂರತ್‌ನಲ್ಲಿರುವ ವಜ್ರದ ವ್ಯಾಪಾರಿಗಳು ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಇದೀಗ ಆ ಟ್ರೆಂಡ್​ ಹೈದರಾಬಾದ್​ಗೂ ಹರಡಿದೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಸಂಪಂಗಿ ಗ್ರೂಪ್ ಕಂಪನಿಯು ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಆಕರ್ಷಕ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಆಯ್ದ ಹತ್ತು ಉದ್ಯೋಗಿಗಳಿಗೆ ಕಾರಿನ ಕೀ ನೀಡಿ ಅಚ್ಚರಿಯ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.

ಅಧ್ಯಕ್ಷ ರಮೇಶ ಸಂಪಂಗಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಸಂಸ್ಥೆಯ ಭಾಗವಾಗಿರುವ ಪ್ರತಿಯೊಬ್ಬರಿಗೂ ದೀರ್ಘಾವಧಿಯ ಆರೋಗ್ಯ ಪ್ರಯೋಜನಗಳು ದೊರೆಯಬೇಕೆಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಬ್ಬಕ್ಕೆ ಕಾಯಿ ಖರೀದಿಸಲು ಬಂದ ಗ್ರಾಹಕರು ಬೆಲೆ ಕೇಳಿ ಬೆಚ್ಚಿಬಿದ್ದರು.

Sun Jan 15 , 2023
ಶ್ರೀನಿವಾಸಪುರ:ಪಟ್ಟಣದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅವರೆ ಕಾಯಿ ಬೆಲೆ ಗಗನಕ್ಕೇರಿದ್ದು, ಹಬ್ಬಕ್ಕೆ ಕಾಯಿ ಖರೀದಿಸಲು ಬಂದ ಗ್ರಾಹಕರು ಬೆಲೆ ಕೇಳಿ ಬೆಚ್ಚಿಬಿದ್ದರು. ಇಷ್ಟು ದಿನ ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಸಗಟು ಬೆಲೆ ಕೆ.ಜಿ.ಯೊಂದಕ್ಕೆ ₹ 28 ರಿಂದ ₹ 30ರ ಆಜೂಬಾಜು ಇತ್ತು. ಚಿಲ್ಲರೆ ಬೆಲೆಯಲ್ಲಿ ಕೆಜಿಯೊಂದಕ್ಕೆ ₹ 40ರಂತೆ ಮಾರಾಟವಾಗುತ್ತಿತ್ತು. ಆದರೆ, ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿತು. ಕೆ.ಜಿ.ಯೊಂದಕ್ಕೆ ಸಗಟು ಬೆಲೆಯಲ್ಲಿ ₹ […]

Advertisement

Wordpress Social Share Plugin powered by Ultimatelysocial