ತಾವು
ಆಶೀರ್ವದಿಸಿದರೆ ಬೀದರ್ ದಕ್ಷಿಣ ಕ್ಷೇತ್ರ ತಾಲೂಕಿನಂತೆ ಅಭಿವೃದ್ಧಿಪಡಿಸ ಲಾಗುವುದು ಡಾ. ಶೈಲೇಂದ್ರ ಬೆಲ್ದಾಳ.ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆ ಎಸ್ ಐ ಐ ಡಿ ಸಿ ಅಧ್ಯಕ್ಷ ಹಾಗೂ ಬಿಜೆಪಿ MLA ಆಕಾಂಕ್ಷಿ ಡಾ! ಶೈಲೇಂದ್ರ ಬೆಲ್ದಾಳೆ ಮಾತನಾಡಿ ಈಭಾಗಕ್ಕೆ ಅವಶ್ಯ ಇರುವ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿ ಅಭಿವೃದ್ಧಿ ಮೆಚ್ಚಿ ಹಲವು ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರುತ್ತಿದ್ದಾರೆ.
ಕೆಟ್ಟ ರಾಜಕಾರಣ ಮಾಡದೇ ಜನರಿಗೆ ಒಳ್ಳೆ ಕೆಲಸ ಮಾಡಬೇಕು. ನಮ್ಮ ಸರ್ಕಾರದಲ್ಲಿ ಆಸ್ಪತ್ರೆ, ರಸ್ತೆ, ಶಾಲಾ-ಕಾಲೇಜು, ಕುಡಿವ ನೀರು, ಏತನೀರಾವರಿ ಸೇರಿದಂತೆ ಜನ ಮೆಚ್ಚಿವಂತ ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲಾಗಿದೆ ಎಂದು ತಿಳಿಸಿದರು.ಪ್ರಜಾಪ್ರಭತ್ವದಲ್ಲಿ ಸೋಲು ಗೆಲವು ಸಹಜ. ಅವಧಿಯಲ್ಲಿ ಮಾಡಿರುವಂತ ಕೆಲಸಗಳು ಎಂದಿಗೂ ಜನರು ನೆನಪಿಸಿಕೊಳ್ಳಬೇಕು. ಅಭಿವೃದ್ದಿ ಸಹಿಸದೇ ವಿನಾಕಾರಣ ಟೀಕೆಗಳು ಮಾಡುತ್ತಾರೆ.
ಪ್ರತಿಯೊಂದು ಹಳ್ಳಿಯಲ್ಲಿ ಸಿಸಿರಸ್ತೆ, ಕುಡಿವ ನೀರು, ವಿದ್ಯುತ್ ಸೇರಿ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಲಾಗಿದೆ. ನಾಲ್ಕು ವರ್ಷಗಳ ಕಾಲ ಮನೆಯಲ್ಲಿ ಕುಳಿತವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಎದ್ದು, ಹಳ್ಳಿಗೆ ಹೋಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಟೀಕೆಗಳಿಗೆ ಯಾವುದೇ ಕಾರಣಕ್ಕೆ ಕಿವಿಕೊಂಡದೇ ಸಂಘಟನೆ ಮಾಡುವ ಕಡೆ ಗಮನಹರಿಸಬೇಕು ಎಂದು ಹೇಳಿದರು. ಜನರ ಆರ್ಶಿವಾದ ನಮ್ಮ ಮೇಲಿದೆ. ಕಾರ್ಯಕರ್ತರು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಾಬಾದೆ, ಶಂಕರ್ ಮುದ್ದ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…