ಇಸ್ಕಾನ್ ಗೆ ನುಗ್ಗಿದ ಸುಮಾರು 500ರ ಜನರ ಗುಂಪು ದೇವಸ್ಥಾನಕ್ಕೆ ಹಾನಿ ಉಂಟು ಮಾಡಿದ್ದೂ ಅಲ್ಲದೇ ಭಕ್ತರನ್ನು ಹತ್ಯೆಗೈದ ಆಘಾತಕಾರಿ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ನವೋಕಾಲಿ ಜಿಲ್ಲೆಯಲ್ಲಿದ್ದ ದೇವಸ್ಥಾನದ ಗೇಟ್ ಮುರಿದ ಗುಂಪು ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ದೇವಸ್ಥಾನದ ಪೀಠೋಪಕರಣ, ಕಿಟಕಿ ಗಾಜು ಮುರಿದಿದ್ದೂ ಅಲ್ಲದೇ ರಥಕ್ಕೆ ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ.
ನಿಮ್ಮಿ ಕಶನ್ ದಾಸ್ ಎಂಬ ಇಸ್ಕಾನ್ ನ ಸಿಬ್ಬಂದಿ ತಲೆ ಮೇಲೆ ಹಲ್ಲೆ ಮಾಡಲಾಗಿದ್ದು, 30 ಹೊಲಿಗೆ ಹಾಕಲಾಗಿದೆ.