ಭೀಕರ ಅಪಘಾತದಲ್ಲಿ ಇಸ್ರೋ ಕ್ಯಾಂಟೀನಿನ ಐವರು ಗುತ್ತಿಗೆ ನೌಕರರು ಮೃತ್ಯು.

ಲಪ್ಪುಝ: ಸೋಮವಾರ ಮುಂಜಾನೆ ಕೇರಳದ ಅಲಪ್ಪುಝ ಜಿಲ್ಲೆಯ ಅಂಬಲಪುಝ ಸಮೀಪ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ತಿರುವನಂತಪುರಂನಲ್ಲಿರುವ ಇಸ್ರೋದ (ISRO) ಕ್ಯಾಂಟೀನಿನ ಐದು ಮಂದಿ ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ.

ಅವರೆಲ್ಲರೂ ವಿವಾಹವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಮುಂಜಾನೆ ಸುಮಾರು 1:30ರ ಹೊತ್ತಿಗೆ ಅಂಬಲಪುಝ ಮೇಲ್ಸೇತುವೆಯಲ್ಲಿ ಉದ್ಯೋಗಿಗಳಿದ್ದ ಕಾರು ಅಕ್ಕಿ ಸಾಗಾಟ ಲಾರಿಯೊಂದಕ್ಕೆ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಐದು ಮಂದಿಯೂ ಸಾವನ್ನಪ್ಪಿದ್ದಾರೆ. ಪೊಲೀಸರು ಲಾರಿ ಚಾಲಕ ಮತ್ತು ಕ್ಲೀನರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದರಲ್ಲಿದ್ದವರನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಕಾರಿನಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಇನ್ನೊಬ್ಬಾತ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾನೆ.

ಮೃತರನ್ನು ಪ್ರಸಾದ್, ಶಾಜುದಾಸ್‌, ಸಚಿನ್‌, ಸುಮೋದ್‌ ಮತ್ತು ಅಮಲ್‌ ಎಂದು ಗುರುತಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ಬಿರಿಯಾನಿ ಆರ್ಡರ್ ಮಾಡಿದ ಹುಡುಗಿ.

Mon Jan 23 , 2023
ಮುಂಬೈ,ಜನವರಿ 23: ಮಧ್ಯಪ್ರೀಯರ ನೆಚ್ಚಿನ ಗಾಯಕ ಜಗಜಿತ್ ಸಿಂಗ್ ಅವರ ಮೆ ನಶೆ ಮೇ ಹೂ…ಎನ್ನುವ ಹಾಡಿನಂತೆ ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್‌ಲೈನ್‌ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೇ ಈ ಹುಡುಗಿ ಕುಡಿತ ಮತ್ತಿನಲ್ಲಿ ಆನ್‌ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್‌ ಹೋಟೆಲ್‌ನಿಂದ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಆರ್ಡರ್‌ ಮಾಡಿರುವ […]

Advertisement

Wordpress Social Share Plugin powered by Ultimatelysocial