ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ಬಿರಿಯಾನಿ ಆರ್ಡರ್ ಮಾಡಿದ ಹುಡುಗಿ.

ಮುಂಬೈ,ಜನವರಿ 23: ಮಧ್ಯಪ್ರೀಯರ ನೆಚ್ಚಿನ ಗಾಯಕ ಜಗಜಿತ್ ಸಿಂಗ್ ಅವರ ಮೆ ನಶೆ ಮೇ ಹೂ…ಎನ್ನುವ ಹಾಡಿನಂತೆ ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್‌ಲೈನ್‌ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೇ ಈ ಹುಡುಗಿ ಕುಡಿತ ಮತ್ತಿನಲ್ಲಿ ಆನ್‌ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್‌ ಹೋಟೆಲ್‌ನಿಂದ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಆರ್ಡರ್‌ ಮಾಡಿರುವ ವಿಚಿತ್ರ ಘಟನೆಯೊಂದ ಸಂಭವಿಸಿದೆ.

ಅಮಲೇರಿದ ಸ್ಥಿತಿಯಲ್ಲಿದ್ದ ಹುಡುಗಿ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಲು ಮುಂದಾಗಿದ್ದಾಳೆ. ಕಣ್ಣುಗಳು ಮಂಜು ಮಂಜಾಗಿ ಕಾಣಿಸಿದ್ದು ತಪ್ಪಾಗಿ ಬೆಂಗಳೂರಿನ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ 2500 ರೂ ಸಹ ಪಾವತಿಸಿದ್ದಾಳೆ.

ನಶೆಯ ಪ್ರಮಾಣ ಕ್ರಮೇಣ ಇಳಿಯುತ್ತಿದ್ದಂತೆ, ಆರ್ಡರ್ ಮಾಡಿದ ವಿಳಾಸವನ್ನು ಪುನಃ ಪರಿಶೀಲಿಸಿದಾಗ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ನಂತರ ನಶೆಯಲ್ಲಿ ನನ್ನೊಂದಿಗೆ ಈ ತರಹದ ಘಟನೆಯೊಂದು ಸಂಭವಿಸಿದೆ ಎಂದು ಟ್ವಿಟ್‌ ಮಾಡಿದ್ದು, ಈ ಪೋಸ್ಟ್‌ಗೆ ಜೊಮ್ಯಾಟೋ ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರಿಂದ ಆಸಕ್ತಿದಾಯಕ ಕಾಮೆಂಟ್‌ಗಳು ಬಂದಿವೆ.

ಟ್ವಿಟ್‌ನಲ್ಲಿ ಏನಿದೆ !

ಅಮಲೇರಿದ ಸ್ಥಿತಿಯಲ್ಲಿದ್ದ ಹುಡುಗಿ ಬೆಂಗಳೂರಿನ ಮೇಘನಾ ಫುಡ್ಸ್ ರೆಸ್ಟೋರೆಂಟ್‌ನಿಂದ ತಪ್ಪಾಗಿ ಬಿರಿಯಾನಿ ಆರ್ಡರ್ ಮಾಡಿದ್ದಾಳೆ. 2500 ರೂಪಾಯಿ ಪಾವತಿಸಿದ್ದಾಳೆ. ನಶೆಯ ಪ್ರಮಾಣ ಕಡಿಮೆಯಾದಾಗ ಮತ್ತೇ ಆರ್ಡರ್ ಸ್ಟೇಟಸ್‌ ಚೆಕ್‌ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿರುವುದು ಖಚಿತವಾಗಿದೆ.ಅವಳು ತನ್ನ ಆದೇಶದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಳೆ. “ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆಯೇ? ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾಳೆ.

ಜನವರಿ 21ರಂದು ಈ ಪೋಸ್ಟ್‌ ಹಾಕಲಾಗಿದ್ದು, ಮತ್ತು ಈಗಾಗಲೇ 492.5k ಬಾರಿ ವೀಕ್ಷಿಸಲಾಗಿದೆ. ಸುಬಿ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನೀವು ಸಂತೋಷದ ಹ್ಯಾಂಗೊವರ್ ಹೊಂದಿರುತ್ತೀರಿ. ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ ಎಂದು ಜೊಮ್ಯಾಟೋ ಕಾಮೆಂಟ್ ಮಾಡಿದೆ.

ಆರ್ಡರ್‌ ಸ್ವೀಕರಿಸಿರುವ ಯುವತಿ ಬಿರಿಯಾನಿಯೊಂದಿಗಿನ ಸಲಾನ್, ರೈತಾ ಮತ್ತು ಚಿಪ್ಸ್ಗಳನ್ನು ಹೊಂದಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಅದರೊಂದಿಗೆ ಅತ್ಯುತ್ತಮ ನಿರ್ಧಾರ ಜೊಮ್ಯಾಟೋ, ನನ್ನ ಸಂಬಳ ಎಲ್ಲಿದೆ ಎಂದು ತಮಾಷೆಯಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಿನಲ್ಲಿ "ಜಸ್ಟ್ ಪಾಸ್" ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.

Mon Jan 23 , 2023
ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮೈಸೂರಿನ ಹಾರ್ಡ್ವಿಕ್ ಪಬ್ಲಿಕ್ ಕಾಲೇಜ್, ನಂಜರಾಜ ಹಾಲ್, ಆಲಮ ಚೌಟ್ರಿ, ಗೌರ್ನಮೆಂಟ್ ಗೆಸ್ಟ್ ಹೌಸ್, ಲೇಡಿಸ್ ಕ್ಲಬ್ ಮುಂತಾದ ಕಡೆ 25 ದಿನಗಳ ಚಿತ್ರೀಕರಣ ನಡೆದಿದೆ. ನಾಯಕ ಶ್ರೀ, ನಾಯಕಿ ಪ್ರಣತಿ, ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ […]

Advertisement

Wordpress Social Share Plugin powered by Ultimatelysocial