ದೆಹಲಿಯ ಜಹಂಗೀರ್‌ ಬಡಾವಣೆಯಲ್ಲಿ ಒತ್ತುವರಿ ತೆರುವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ!

 

ದೆಹಲಿಯ ಜಹಂಗೀರ್‌ ಬಡಾವಣೆಯಲ್ಲಿ ಒತ್ತುವರಿ ತೆರುವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.

ಸೋಮವಾರ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ದಿಢೀರನೆ ಜಹಂಗೀರ್‌ ಬಡಾವಣೆ ತೆರವು ಕಾರ್ಯಾಚರಣೆ ಆರಂಭಿಸಿತು. ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಮಸೀದಿ ಹಾಗೂ ಮನೆಗಳನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಕೂಡಲೇ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶದ ಹೊರತಾಗಿಯೂ ಸ್ಥಳೀಯ ಆಡಳಿತ ನೆಲಸಮ ಕಾಮಗಾರಿ ಮುಂದುವರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರಿಂಕೋರ್ಟ್‌ ಬುಧವಾರ ಎರಡು ಬಾರಿ ಮಧ್ಯಪ್ರವೇಶ ಮಾಡಬೇಕಾಯಿತು.

ಗುರುವಾರ ಬೆಳಿಗ್ಗೆ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್‌, ಕೂಡಲೇ ಸಮಗ್ರ ವರದಿ ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಅವರನ್ನುಅವಮಾನಿಸಿ ಕೆಟ್ಟದ್ದಾಗಿ ಬಿಂಬಿಸಿದ ಆರೋಪದ ಮೇಲೆ ಬಂಧಿಸಿದ ಅಸ್ಸಾಂ ಪೊಲೀಸರು

Thu Apr 21 , 2022
ಅಹಮದಾಬಾದ್.ಏ.21- ಪ್ರಧಾನಿ ನರೇಂದ್ರ ಮೋದಿ ಅವರನ್ನುಅವಮಾನಿಸಿ ಕೆಟ್ಟದ್ದಾಗಿ ಬಿಂಬಿಸಿದ ಆರೋಪದ ಮೇಲೆ ಗುಜರಾತ್‍ನ ಕಾಂಗ್ರೇಸ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಬಿಜೆಪಿ ನಾಯಕರ ದೂರಿನ ಮೇರೆಗೆ ಬಂಧನವಾಗಿದೆ ಎಂದು ಹೇಳಲಾಗಿದೆ. ಕೊಕ್ರಜಾರ್ ಪೊಲೀಸರು ರಾತ್ರಿ 11.30 ರ ಸುಮಾರಿಗೆ ಪಾಲನ್ಪುರದ ಸಕ್ರ್ಯೂಟ್ ಹೌಸ್‍ನಿಂದ ಬಂಧಿಸಿ ಅಹಮದಾಬಾದ್‍ಗೆ ಕರೆತಂದು ಅಲ್ಲಿಂದ ಅವರನ್ನು ಇಂದು ಬೆಳಿಗ್ಗೆ ಅಸ್ಸಾಂಗೆ ಕರೆದೊಯ್ಯಲಾಯಿತು. ಎಂದು ಮೂಲಗಲು ತಿಳಿಸಿವೆ. ಅಸ್ಸಾಂನ ಕೊಕ್ರಜಾನರ್‍ನ ಬಿಜೆಪಿ […]

Advertisement

Wordpress Social Share Plugin powered by Ultimatelysocial