ತಂದೆ, ತಂಗಿ ಜೊತೆ ಫ್ಯಾಮಿಲಿ ಟ್ರಿಪ್​ ಹೊರಟ ಜಾನ್ವಿ ಕಪೂರ್​;

ಶಿಖರ್​ ಪಹರಿಯಾ ಜೊತೆ ಜಾನ್ವಿ ಕಪೂರ್​ ಡೇಟಿಂಗ್​ ಮಾಡುತ್ತಿದ್ದಾರೆ. ಅನೇಕ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು.ಸೆಲೆಬ್ರಿಟಿಗಳ ಲವ್​ ಲೈಫ್​ ಬಗ್ಗೆ ಜನರಿಗೆ ಎಲ್ಲಿಲ್ಲದ ಆಸಕ್ತಿ.ಅದರಲ್ಲೂ ಸ್ಟಾರ್​ ನಟರ ಮಕ್ಕಳ ಮೇಲೆ ಗಾಸಿಪ್​ ಮಂದಿ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಹಾಗಾಗಿ ಎಲ್ಲರ ಕಣ್ಣು ತಪ್ಪಿಸಿ ಡೇಟಿಂಗ್​ ಮಾಡುವುದು ಕೊಂಚ ಕಷ್ಟ. ನಟಿ ಜಾನ್ವಿ ಕಪೂರ್​ ಅವರು ಸಿನಿಮಾದ ಜೊತೆಗೆ ಇಂಥ ಗಾಸಿಪ್​ಗಳ ಕಾರಣದಿಂದಲೂ ಸುದ್ದಿ ಆಗುತ್ತಾರೆ. ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಶಿಖರ್​ ಪಹರಿಯಾ ಜೊತೆಗೆ ಅವರು ಡೇಟಿಂಗ್​  ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಈಗ ಶಿಖರ್​ ಪಹರಿಯಾ  ಅವರು ಜಾನ್ವಿ ಕಪೂರ್​ಕುಟುಂಬದವರ ಜೊತೆ ಟ್ರಿಪ್​ಗೆ ತೆರಳಿದ್ದಾರೆ. ಎಲ್ಲರೂ ಜೊತೆಯಾಗಿ ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸುತ್ತಿರುವುದು ಪಾಪರಾಜಿಗಳ ಕಣ್ಣಿಗೆ ಬಿದ್ದಿದೆ.

ಖ್ಯಾತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್​ ಅವರ ಪುತ್ರಿ ಎಂಬ ಕಾರಣಕ್ಕೆ ಜಾನ್ವಿ ಕಪೂರ್​ ಅವರನ್ನು ಪಾಪರಾಜಿಗಳು ಸದಾ ಹಿಂಬಾಲಿಸುತ್ತಾರೆ. ಅವರು ಎಲ್ಲೇ ಹೋದರೂ ಫೋಟೋ ಕ್ಲಿಕ್ಕಿಸಲಾಗುತ್ತದೆ. ಇತ್ತೀಚೆಗೆ ಜಾನ್ವಿ ಕಪೂರ್​ ಅವರು ತಂದೆ ಬೋನಿ ಕಪೂರ್ ಹಾಗೂ ತಂಗಿ ಖುಷಿ ಕಪೂರ್​ ಜೊತೆ ವಿದೇಶಕ್ಕೆ ತೆರಳಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವಾಗ ಅವರ ಜೊತೆ ಶಿಖರ್​ ಪಹರಿಯಾ ಕೂಡ ಕಾಣಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್​ ಶಿಂಧೆ ಅವರ ಮೊಮ್ಮಗನಾಗಿರುವ ಶಿಖರ್​ ಪಹರಿಯಾ ಜೊತೆ ಜಾನ್ವಿ ಕಪೂರ್​ ಡೇಟಿಂಗ್​ ಮಾಡುತ್ತಿದ್ದಾರೆ. ಅನೇಕ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಆದರೆ, ಎಂದಿಗೂ ಬಹಿರಂಗವಾಗಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿಲ್ಲ. ಇಂದಲ್ಲ ನಾಳೆ ಈ ವಿಷಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಜಾನ್ವಿ ಕಪೂರ್​ ಮತ್ತು ಶಿಖರ್​ ಪಹರಿಯಾ ನಡುವಿನ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಒಪ್ಪಿಗೆ ಇರುವುದರಿಂದಲೇ ಜಾನ್ವಿ ಕಪೂರ್​ ಅವರ ಕುಟುಂಬದವರೊಂದಿಗೆ ಶಿಖರ್​ ಪಹಾರಿಯಾ ಟ್ರಿಪ್​ ತೆರಳಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಅಳಿಯನನ್ನು ಕರೆದುಕೊಂಡು ಬೋನಿ ಕಪೂರ್ ಟ್ರಿಪ್​ ಮಾಡುತ್ತಿದ್ದಾರೆ’ ಎಂಬ ಕಮೆಂಟ್​ಗಳು ಬಂದಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜಲಿ ಉತ್ಸವ ಕಾರ್ಯಕ್ರಮ.

Thu Mar 2 , 2023
  ಚೆಸ್ಕಾಂ ಮೈಸೂರು ಮತ್ತು ಆರ್ ಈ ಸಿ, ಭಾರತ ಸರ್ಕಾರದ ಇಂಧನ ಸಚಿವಾಲಯದ ಸಹಯೋಗದೊಂದಿಗೆ ಆಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜಲಿ ಉತ್ಸವ ಕಾರ್ಯಕ್ರಮವನ್ನು ನಂಜನಗೂಡಿನಲ್ಲಿ ಆಯೋಜನೆ ಮಾಡಲಾಗಿತ್ತು .ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ವಿಭಾಗದ ಚೆಸ್ಕಾಂ ವ್ಯವಸ್ಥಾಪಕ ಜಯವಿಭವಸ್ವಾಮಿ ಹಾಗೂ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು .ಬಳಿಕ ಅವರು ಮಾತನಾಡಿ ಯಾವುದೇ ಕಾರಣಕ್ಕೂ ವಿದ್ಯುತ್ ಕಳ್ಳತನ […]

Advertisement

Wordpress Social Share Plugin powered by Ultimatelysocial