ಜಸ್ಪಾಲ್ ಭಟ್ಟಿ ಕಿರುತೆರೆ ಮೆಚ್ಚಿನ ಕಲಾವಿದರಲ್ಲಿ ಜಸ್ಪಾಲ್ ಭಟ್ಟಿ ಒಬ್ಬರು.

 

 

ಜಸ್ಪಾಲ್ ಭಟ್ಟಿನಾನು ಕಿರುತೆರೆ ಕಾರ್ಯಕ್ರಮಗಳನ್ನು ಇಷ್ಟಪಟ್ಟು ನೋಡುತ್ತಿದ್ದ ದಿನಗಳಲ್ಲಿ ಜನಪ್ರಿಯರಾಗಿದ್ದ ನನ್ನ ಮೆಚ್ಚಿನ ಕಲಾವಿದರಲ್ಲಿ ಜಸ್ಪಾಲ್ ಭಟ್ಟಿ ಒಬ್ಬರು.ಜಸ್ಪಾಲ್ ಭಟ್ಟಿ ಅವರು ಜನಿಸಿದ ದಿನ ಮಾರ್ಚ್ 3, 1955. ಅವರು ಶುದ್ಧ ಹಾಸ್ಯದ ಮೂಲಕ ಜನಸಾಮಾನ್ಯರ ನೋವುನಲಿವುಗಳನ್ನು ವ್ಯಕ್ತಪಡಿಸಿದ ಪ್ರತಿಭಾವಂತ ಕಲಾವಿದ.‘ಫ್ಲಾಪ್ ಶೋ’ ಹಾಗೂ ‘ಉಲ್ಟಾ ಪಲ್ಟಾ’ ಮುಂತಾದ ದೂರದರ್ಶನ ಸರಣಿ ಕಾರ್ಯಕ್ರಮಗಳ ಮೂಲಕ ಇಡೀ ದೇಶವನ್ನೇ ನಗೆ ಅಲೆಯಲ್ಲಿ ತೇಲಿಸಿದ ಜಸ್ಪಾಲ್ ಭಟ್ಟಿ ಅವರಲ್ಲಿ ಹಾಸ್ಯ ಪ್ರಜ್ಞೆ ರಕ್ತಗತವಾಗಿತ್ತು. ವೃತ್ತಿಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿದ್ದರೂ, ಜಸ್ಪಾಲ್ ಭಟ್ಟಿ ಕಲೆಯತ್ತ ಮುಖಮಾಡಿ ನಿಂತರು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಜಸ್ಪಾಲರಿಗೆ ನಾಟಕಗಳತ್ತ ಅಪಾರ ಒಲವಿತ್ತು. ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸ್ವಲ್ಪ ಕಾಲ ಅವರು ಪಂಜಾಬಿ ಪತ್ರಿಕೆಯೊಂದಕ್ಕೆ ವ್ಯಂಗ್ಯಚಿತ್ರಕಾರನಾಗಿ ದುಡಿದರು. 80ರ ದಶಕದಲ್ಲಿ ದೂರದರ್ಶನದಲ್ಲಿ ಜನಪ್ರಿಯಗೊಂಡ ‘ಉಲ್ಟಾ ಪಲ್ಟಾ’ ಜಸ್ಪಾಲ್ ಭಟ್ಟಿ ಅವರ ಪ್ರಥಮ ಕಿರುತೆರೆ ಪ್ರವೇಶ. ಪ್ರಚಲಿತದಲ್ಲಿನ ಅನೇಕ ಸಾಮಾಜಿಕ ವಿಷಯ-ವಿವಾದಗಳನ್ನು ವಿಡಂಬನಾತ್ಮಕವಾಗಿ ತೆರೆದಿಟ್ಟ ಈ ಕಾರ್ಯಕ್ರಮ ಜಸ್ಪಾಲರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.‘ಉಲ್ಟಾಪಲ್ಟಾ’ದ ಅಪಾರ ಯಶಸ್ಸು ಕಂಡ ಬೆನ್ನಲ್ಲೇ ಜಸ್ಪಾಲ್ ಭಟ್ಟಿ ಅವರ ಮತ್ತೊಂದು ಕಿರುತೆರೆ ಧಾರವಾಹಿ ‘ಫ್ಲಾಪ್ ಶೋ’ ಕೂಡಾ ಸೂಪರ್ ಹಿಟ್ ಎನಿಸಿತು. ಶ್ರೀಸಾಮಾನ್ಯ ಎದುರಿಸುವ ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಫ್ಲಾಪ್ ಶೋ ಅಪಾರವಾದ ಯಶಸ್ಸು ಕಂಡಿತು. ಇವುಗಳೆಲ್ಲದರ ಜೊತೆಗೆ ಜಸ್ಪಾಲ್ ಭಟ್ಟಿಯವರ ‘ನೋ ನಾನ್‌ಸೆನ್ಸ್ ಕ್ಲಬ್’ ಬಳಗವು ಶ್ರೀಸಾಮಾನ್ಯನ ದಿನನಿತ್ಯದ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ಅನೇಕ ಬೀದಿ ನಾಟಕಗಳನ್ನು ದೇಶಾದ್ಯಂತ ಪ್ರದರ್ಶಿಸಿ, ವ್ಯಾಪಕವಾಗಿ ಗಮನ ಸೆಳೆದಿತ್ತು.ದೂರದರ್ಶನದಲ್ಲಿನ ತಮ್ಮ ಕಾರ್ಯಕ್ರಮಗಳ ಮೂಲಕ ಜಸ್ಪಾಲ್ ಭಟ್ಟಿ ಭಾರತದೆಲ್ಲೆಡೆಯಲ್ಲಿ ಮನೆಮಾತಾದರು. ಕಿರುತೆರೆಯಲ್ಲಿ ಯಶಸ್ಸಿನ ಸವಿಕಂಡ ಜಸ್ಪಾಲ್ ಭಟ್ಟಿ, ಚಿತ್ರರಂಗಕ್ಕೂ ತಮ್ಮನ್ನು ವಿಸ್ತರಿಸಿಕೊಂಡಿದ್ದರು. 1999ರಲ್ಲಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಪಂಜಾಬಿ ಚಿತ್ರ ‘ವೊಹೌಲ್ ಠೀಕ್ ಹೈ’ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ ಕುರಿತಾದ ಕಥಾವಸ್ತುವನ್ನೊಳಗೊಂಡಿತ್ತು. ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟರು ಹಾಗೂ ಕುಡುಕರೆಂಬಂತೆ ಬಿಂಬಿಸುವ ಮೂಲಕ ಜಸ್ಪಾಲ್ ಭಟ್ಟಿ ಪಂಜಾಬ್‌ ಪೊಲೀಸ್ ಇಲಾಖೆಗೆ ಕಳಂಕ ತರುವ ಯತ್ನವನ್ನು ಮಾಡಿದ್ದಾರೆಂದು ಅವರ ಚಿತ್ರ ಹಲವಾರು ವಿರೋಧಗಳನ್ನೂ ಎದುರಿಸಬೇಕಾಯಿತು. ಇಷ್ಟಾದರೂ ಸರಳವಾದ ಕಥೆ ಹಾಗೂ ಚುರುಕುತನದ ನಿರೂಪಣೆಯಿಂದಾಗಿ ಈ ಚಿತ್ರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿ, ಗಲ್ಲಾಪಟ್ಟಿಗೆಯಲ್ಲಿ ಭರ್ಜರಿ ಗಳಿಕೆಯನ್ನು ಕಂಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ.

Mon Mar 6 , 2023
    ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ ಮಾಧುರ್ಯಯುತ ಕನ್ನಡದ ಧ್ವನಿಯ ನಿರೂಪಕಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ, ಸ್ರೀ ಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ಕಗ್ಗ ಬಳಗದ ಸ್ಥಾಪಕರಾಗಿ ಹೀಗೆ ಹಲವು ರೀತಿಯಲ್ಲಿ ಅವರು ಸಕ್ರಿಯರು.ಭವಾನಿ ಲೋಕೇಶ್ ಅವರ ಜನ್ಮದಿನ ಮಾರ್ಚ್ 3. ಅವರು ಮಂಡ್ಯ ಜಿಲ್ಲೆಯ ಕೆರೆಗೂಡಿನಲ್ಲಿ ಜನಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್‍ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಯುಜಿಸಿ […]

Advertisement

Wordpress Social Share Plugin powered by Ultimatelysocial