ವಿಧಾನಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ನಾನೇ:

 

ಹಾಸನ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆಯೇ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಹೀಗಿರುವಾಗಲೇ ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ನಾನೇ ಅಭ್ಯರ್ಥಿಯೆಂದು ಹೇಳಿಕೊಂಡಿದ್ದಾರೆ.

ಕಕ್ಕೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರು ಮಾತನಾಡಿಕೊಂಡು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದಾರೆ.

ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ನನಗೂ ಅನುಕೂಲ ಆಗಲಿದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದಿಂದ ಬಜೆಟ್ ಇದ್ದರು ಕೃಷಿ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪ್ ನೀಡದೇ ಇರುವ ಕಂಪೆನಿಗಳನ್ನು ರದ್ದು.

Tue Jan 24 , 2023
ಸರ್ಕಾರದಿಂದ ಬಜೆಟ್ ಇದ್ದರು ಕೃಷಿ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪ್ ನೀಡದೇ ಇರುವ ಕಂಪೆನಿಗಳನ್ನು ರದ್ದು ಮಾಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುನ್ನೆಚ್ಚರಿಕೆ ನೀಡಲಾಯಿತು ಸರ್ಕಾರದಿಂದ ಬಜೆಟ್ ಬಂದಿದ್ದು ರೈತರಿಗೆ ರೈತರಿಗೆ ತಲುಪಬೇಕಾಗಿದೆ ಸ್ಪಿಂಕ್ಲರ್ ಟೈಪ್ ಗಳು ಕೊಟ್ಟಿರುವುದಿಲ್ಲ ಕಂಪನಿಗಳು ಅಧಿಕಾರಿಗಳು ಶಮಿಳಾಗಿದ್ದಾರೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯ ಮಹೇಶ್ ಗೌಡ ಸುಬೇದಾರ್ ರಾಜ್ಯ ಕಾರ್ಯಧ್ಯಕ್ಷರು ಅಧಿಕಾರಿಯನ್ನು ತರಾಟೇ […]

Advertisement

Wordpress Social Share Plugin powered by Ultimatelysocial