ಹೊನ್ನಾಂಬ ನಾಟಕ ಮಂಡಳಿ ದಂಡಿನಶಿವರ ಮತ್ತು ಯಡಿಯೂರು ಸಾಂಸ್ಕೃತಿಕ ವೇದಿಕೆ, ಮಾಯಸಂದ್ರ ಕಲಾಭಿಮಾನಿ ಬಳಗ ವತಿಯಿಂದ ಭಾನುವಾರ ಸಂಜೆ, ಬಸ್ಟಾಂಡ್ ಸನ್ಮಾನ್ ಹೋಟೆಲ್ ನ ಬಾಣಸಿಗ ಮತ್ತು ಕಲಾವಿದ ಗೋಪಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ರಾಮಾಯಣ ಎಂಬ ಪೌರಾಣಿಕ ನಾಟಕದಲ್ಲಿ 51ನೇ ಭಾರಿ ಜಟಾಯು ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.ಮತ್ತು ತುರ್ತು ಸಂದರ್ಭಗಳಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿಯಾಗಿ ಅದ್ಭುತವಾದ ಅಭಿನಯವನ್ನು ಮಾಡಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಬಾಣಸಿಗ ವೃತ್ತಿಯನ್ನು ಮಾಡುತ್ತಾ, ಕಲೆಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ.
ಈ ಸಂದರ್ಭದಲ್ಲಿ ಸನ್ಮಾನ್ ಹೋಟೆಲ್ ನ ಮಾಲಿಕರಾದ ಸತ್ಯಾನಂದ ರಾವ್. ಡಿ.ಟಿ. ಶ್ರೀನಿವಾಸ್ ಶಿಕ್ಷಕರು. ವೇಗಣ್ಣ ಪೋಸ್ಟ್ ಮಾಸ್ಟರ್. ಸಂತೋಷ್. ಹಿರಿಯ ಮುಖಂಡರಾದ ನಂಜಪ್ಪನವರು ಸೇರಿದಂತೆ ಸನ್ಮಾನ್ ಹೋಟೆಲ್ ಎಲ್ಲಾ ಸಿಬ್ಬಂದಿಗಳು, ಗ್ರಾಮಸ್ಥರು, ಮುಂತಾದವರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada