KSRTC ನೌಕರಿ ಹಾಗೂ ವರ್ಗಾವಣೆ ಇದ್ರೆ ಮಾಡಿಕೊಸಿಕೊಡುತ್ತೇನೆ ಅಂತಾ ಹೇಳಿದ ರಾಮದುರ್ಗದ ಸುನಂದಾ ಹಡಪದ

ಪೊಲೀಸ್ ಮಾಹಾಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಂದು ಸುಳ್ಳು ಹೇಳುತ್ತಾ ಜನರ ದಾರಿತಪ್ಪಿಸುವ ಚಾಲಾಕಿಹೌದು ವೀಕ್ಷಕರೇ ರಾಜ್ಯದಲ್ಲಿ
ಪಿಎಸ್ಐ ಪರೀಕ್ಷೆ ಹಗರಣ ಬೆಂಕಿ ಇನ್ನೂ ಆರಿಲ್ಲ ಅಂತಹದರಲ್ಲಿ ಇಲ್ಲಿಯೊಬ್ಬರು ksrtc ನೌಕರಿ ಹಾಗೂ ವರ್ಗಾವಣೆ ಇದ್ರೆ ಮಾಡಿಕೊಸಿಕೊಡುತ್ತೇನೆ ಅಂತಾ ಹೇಳಿದ್ದಾರೆ.

ಅದು ಬೇರೆಯ್ಯಾರು ಅಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪೊಲೀಸ ಮಾಹಾಸಂಘದ ಮಹಿಳಾ ಅಧ್ಯಕ್ಷೆ ಸುನಂದಾ ಹಡಪದ

ಅವರು ಸಂಘದ ಉದ್ಘಾಟನೆ ಪೂರ್ವಬಾವಿ ಸಭೆಯಲ್ಲಿ ಮಾತನಾಡುವಾಗ

KSRTCಯಲ್ಲಿ ಯಾರಾದರೂ ನೌಕರಿಗೆ ಹೋಗುವವರು ಮತ್ತು ನೌಕರಿ ಮಾಡುತ್ತಿರುವವರ ವರ್ಗಾವಣೆ ಇದ್ದರೆ ನನನ್ನು ಸಂಪರ್ಕಮಾಡಿ ಯಾಕೆಂದರೆ ಶ್ರೀಮಾನ್ಯ ಸಚಿವರಾದ ಶ್ರೀರಾಮುಲುರವರು ಮೊನ್ನೆತಾನೆ ನನಗೆ ಕರೆ ಮಾಡಿ ಹೇಳಿದ್ದಾರೆ* ಎಂದು ಭಾಷಣ ಮಾಡಿದ್ದಾರೆ.KSRTC* ಗೇ ಬರುವ ಟ್ರಾನ್ಸ್ಫರ್ ಗಳು ಹಾಗೂ Job ಗಳು ನಾನು ಮಾಡಿಸಿಕೊಡುತ್ತೇನೆ ಎಂದು ಶ್ರೀರಾಮುಲು ಅವರು ಸುನಂದಾ ಅವರಿಗೆ ಕಾಲ್ ಮಾಡಿ ಹೇಳಿದ್ದಾರಂತೆ.ಹಾಗಾದ್ರೆ ಶ್ರೀರಾಮಲು ಇವರಿಗೆ ಆಪ್ತರಾ?

ಅದೇ ಸಂದರ್ಬದಲ್ಲಿ ಮತ್ತೆ
ಸುನಂದ ಅವರು
ನನ್ನನ್ನು ಎತ್ತರಕ್ಕೆ ಬೆಳೆಸಿರಿ ನಾನು ಯಾವ ಇಲಾಖೆಯ ಮುಂದೆ ಮಾತನಾಡಿಯೂ ನಿಮ್ಮ್ ಕಣ್ಣಿರನ್ನು ವರಿಸುತ್ತೆನೆ. ಹಾಗೂ ರಾಮದುರ್ಗದ ಇನ್ನೊಂದು ಪೋಲಿಸ ಮಹಾಸಂಘ ಬಣದ ಯಾವುದೇ ಸದಸ್ಯರಿಗೆ ನಾನು ಮಾಡುವ ಕಾರ್ಯಕ್ರಮದಲ್ಲಿ ಆವ್ಹಾನಿಸುವುದಿಲ್ಲ ಎಂದು ರಾಮದುರ್ಗದಲ್ಲಿ ಆ ಬಣ ಈ ಬಣ ಎಂದು ಹುಟ್ಟಿಸುತ್ತಿದ್ದಾರೆ.ಈ ಹಿಂದೆ ನಡೆದ ಪೊಲೀಸ್ ಮಾಹಾಸಂಘದ ಜನಸ್ಪಂದನ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡಿದರೆ
ಶ್ರೀರಾಮುಲು ಅವರಿಗೆ ನಿಮಗೂ ಎಷ್ಟು ದಿನಗಳಿಂದ ಪರಿಚಯ ಅಂತ ಕೇಳಿದರೆ?

ಇಲ್ಲಾ ಹುಲಕುಂದ ಗ್ರಾಮದಲ್ಲಿ ಅವರ PA ಇರುವರು ಅಂತ ಹೇಳಿ ಈ ಥರ ಹಾರಿಕೆ ಉತ್ತರ ನಿಡಿ ಜನಗಳಿಗೆ ನೌಕರಿ ಕೊಡಿಸುವುದಾಗಿ ಆಸೆ ಹುಟ್ಟಿಸಿ ದಾರಿತಪ್ಪಿಸುತ್ತಿದ್ದಾರೆ.

ಇನ್ನೊಂದು ವಿಷಯ ಏನಂದ್ರೆ ಇವರು ತಾವೇ ಖುದ್ದಾಗಿ phone ಕರೆಮಾಡಿ ಪೊಲೀಸ್ ಮಾಹಾಸಂಘದಲ್ಲಿ ಇವರಿಗೆ ಇರುವ ಹುದ್ದೆ (post) ರಾಮದುರ್ಗ ತಾಲೂಕ ಮಹಿಳಾ ಸಂಘದ ಅಧ್ಯಕ್ಷರು ಆದರೆ ಇವರು ಹೇಳತ್ತಾರೆ ನಾನು ಪೊಲೀಸ್ ಮಾಹಾಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಂದು ಹೇಳುತ್ತಾರೆ ಈ ಥರ ಸುಳ್ಳು ಹೇಳುವದು ಏಕೆ ?

ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಈ ಸಂಘದ ಸಂಸ್ಥಾಪಕ ಅಧ್ಯಕ್ಷರು ಈ ವಿಷಯ ಬಗ್ಗೆ ಗಮನಹರಿಸಿ
ಇದು ಶ್ರೀರಾಮುಲು ಅವರು ಇವರ ಜೊತೆಯಲ್ಲಿದ್ದಾರಾ?

ಅಥವಾ ಇವರು ಸಚಿವ ಶ್ರೀ ರಾಮಲು ಹೆಸರು ಹೇಳಿಕೊಂಡು ಜನಗಳಿಗೆ ದಾರಿತಪ್ಪಿಸತಾದ್ದಾರಾ ?

ಹಾಗೂ ಹುಲಕುಂದ ಗ್ರಾಮದ ಶ್ರೀ ರಾಮಲು ಅವರ P. A ಯ್ಯಾರು?

ಎಂಬುವುದು ಆದಷ್ಟು ಬೇಗ ಸಾರ್ವಜನಿಕವಾಗಿ ಬಹಿರಂಗವಾಗಿ ಹೇಳಿಕೆ ನೀಡುವರಾ ಎಂದು ಹಾಗೂ ನೌಕರಿ ಕೊಡಿಸುವುದಾಗಿ ಸುಳ್ಳು ಹೇಳಿ ಜನರಿಗೆ ಮಳ್ಳು ಮಾಡುವವರನ್ನು ಅಧಿಕಾರಿಗಳು ಯಾವ ಕಾನೂನಿನ ಸೂಕ್ತ ಕ್ರಮ ಕೈಗೊಳ್ಳುವವರ ಎಂದು ಕಾದನೋಡಬೇಕಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ಗೂ ಕರೊನಾ ಸೋಂಕು ತಗುಲಿದೆ

Sat Jun 4 , 2022
ಮುಂಬೈ: ಇತ್ತೀಚೆಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ಕೋವಿಡ್​ ಸೋಂಕು ತಗುಲಿತ್ತು, ಇದೀಗ ಮತ್ತೊಬ್ಬ ನಟನಿಗೂ ಕರೊನಾ ದೃಢವಾಗಿದೆ. ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ಗೂ ಕರೊನಾ ಸೋಂಕು ತಗುಲಿದೆ ಎಂದು ಸ್ವತಃ ಅವರೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ನಟನೆಯ ಭೂಲ್​ ಭುಲಯ್ಯಾ 2 ಚಿತ್ರ ಯಶಸ್ಸಿನ ನಡುವೆ ಕಾರ್ತಿಕ್​ ಈಗ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಾದ್ಯಂತ ಇದೇ ಚಿತ್ರ ಪ್ರಚಾರದಲ್ಲಿ ಕೈಗೊಂಡಿದ್ದ […]

Advertisement

Wordpress Social Share Plugin powered by Ultimatelysocial