ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಕಬಿಜೆಪಿ ಪಕ್ಷದ ಅಭ್ಯರ್ಥಿ ಕೆ. ಕರಿಯಪ್ಪ ಅವರಿಂದ ಇಂದು ನಾಮಪತ್ರ ಸಲ್ಲಿಕೆ, ನಗರದ ಎ ಪಿ ಎಂ ಸಿ ಗಣೇಶ್ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಕೆ. ಕರಿಯಪ್ಪ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಪಾರ ಜನಸಂಖ್ಯೆಯು ಅವರ ಜೊತೆಗೆ ದಾರಿ ಯುದ್ಧಕೂ ಹೆಜ್ಜೆ ಹಾಕಿ ಕೆ. ಕರಿಯಪ್ಪ ನವರಿಗೆ ಸತ್ ನೀಡಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ ಈ ಬಾರಿ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ, ಕರಿಯಪ್ಪ ಪ್ರಚಂಡ ಬಹುಮತದಿಂದ ಆಯ್ಕೆ ಯಾಗುತ್ತರೆ. ಈ ಬಾರಿ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಲಕ್ಷ್ಮಿರಡ್ಡಿ, ದೊಡ್ಡಬಸವರಜ, ರಾಜೇಶ ಹಿರೇಮಠ, ಅಮರೇಗೌಡ ವಿರೂಪಾಪುರ, ಹನುಮೇಶ ಸಾಲಗುಂದ, ನಿರೂಪಾದಿ ಜೋಳದರಾಶಿ, ಮರಿಯಪ್ಪ.ಕೆ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದರು.
https://play.google.com/store/apps/details?id=com.speed.newskannada