ಕಾಗವಾಡ:ಡಾ ಬಿ ಆರ್ ಅಂಬೇಡ್ಕರ್ ಅವರು ಕೊಡುಗೆ ಅಪಾರವಾದದ್ದು: ಶಾಸಕ ಶ್ರೀಮಂತ ಪಾಟೀಲ.

ಕಾಗವಾಡ:ಡಾ ಬಿ ಆರ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನ ಅಪಾರವಾದದ್ದು ಅವರು ಬರೆದ ಸಂವಿಧಾನದಿಂದಲೇ ನಾವೇಲ್ಲ ಬದುಕುತ್ತಿದ್ದೇವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಹೇಳಿದರು

ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಾ ಪಟ್ಟಣದಲ್ಲಿರುವ ಶಿವಾನಂದ ಮಹಾವಿದ್ಯಾಲಯದಲ್ಲಿ ತಾಲೂಕಾ ಆಡಳಿತ ಆಯೋಜನೆ ಮಾಡಿದ್ದ 74 ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು

ಭಾರತದಲ್ಲಿ ಎಲ್ಲರಿಗೂ ಸಮಾನತೆ ದೊರಕಿಸಿಕೋಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಮತ್ತು 12 ನೇ ಶತಮಾನದಲ್ಲಿ ಬಸವಣ್ಣ ಹಾಗೂ ಬುದ್ದ ಅವರು ಸಹ ಸಮಾನತೆಗಾಗಿ ಶ್ರಮಿಸಿದ್ದಾರೆ.ಸಂವಿಧಾನವು ಜಾರಿಗೆ ಬಂದು ಇಂದಿಗೆ 74 ವರ್ಷವಾಯಿತು ಸಂವಿಧಾನದಿಂದಲೇ ಪ್ರಜಾಪ್ರಭುತ್ವ ಜಾರಿಗೆ ಬಂದಿದೆ ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡಲು ಶಿಕ್ಷಣ ಬಹಳ ಮುಖ್ಯ ಎಂದು ಹೇಳಿದರು

ಇನ್ನು ಈ ಸಂದರ್ಭದಲ್ಲಿ ಕಾಗವಾಡ ತಹಶೀಲ್ದಾರ ರಾಜೇಶ್ ಬುರ್ಲಿ ಅವರು ಇತ್ತೀಚೆಗೆ ಸಹಾಯಕ ಮತದಾರರ ನೊಂದಾಣಾಧಿಕಾರಿಯಾಗಿ ಅತ್ಯುತ್ತಮ ಪ್ರಶಸ್ತಿ ಪಡೆದು ಕಾಗವಾಡ ತಾಲೂಕಿಗೆ ಕೀರ್ತಿಯನ್ನ ತಂದಿದ್ದ ಕಾರಣ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ತದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾಷಣಗಳು ಜರುಗಿದವು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಟಲಿಜೆನ್ಸ್ ಬ್ಯೂರೋ ಸಿಬ್ಬಂಧಿಯಿಂದ ಬಯಲಾಯ್ತು ಚೈನ್ ಲಿಂಕ್ ವಂಚನೆ.

Thu Jan 26 , 2023
ಪಿರಮಿಡ್ ರೀತಿಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚನೆ ಮಾಡ್ತಿದ್ದವರ ಬಂಧನ. ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಗಳ ಬಂಧನ. ಶೇಕ್ ಸಾಧಿಕ್ ,ಯೋಗೇಶ್ , ಪ್ರಮೋದ್ , ಸುನೀಲ್ ಜೋಷಿ ಬಂಧಿತರು. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿಗಳು. ಇ ಬಯೋಮೆಟ್ರಿಕ್ ಎವಾಲ್ಯೂಷನ್ ಎಂಬ ಕಂಪನಿಯ ಕಾರ್ಯಕ್ರಮ ಆಯೋಜನೆ. ಗ್ರಾಹರಿಂದ ಹಣ ಡೆಪಾಸಿಟ್ ಮಾಡಿಕೊಂಡು ಹೆಚ್ಚಿನ ಹಣದ ಆಮೀಷ ಒಡ್ಡುತ್ತಿದ್ದ ಆರೋಪಿಗಳು.. ಮಲ್ಟಿ ಲೆವೆಲ್ ಮನಿ‌ ಮಾರ್ಕೆಟಿಂಗ್ ಸ್ಕೀಮ್ […]

Advertisement

Wordpress Social Share Plugin powered by Ultimatelysocial