ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದಲ್ಲಿ 3ನೇ ಹಂತದ ನಗರೋತ್ಥಾನ ಕಾಮಗಾರಿ ಯನ್ನ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾತಿ ದರಗಿ ಚಾಲನೆ ನೀಡಿದರು.ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಮರು ಚಾಲನೆ ನೀಡುವ ಮೂಲಕ ಸ್ವಾತಿ ದರಗಿಯವರು ದಿಟ್ಟ ಹೆಜ್ಜೆಯನ್ನಇಟ್ಟಿದ್ದಾರೆ. ರಸ್ತೆಯ ಮೇಲೆ ಒತ್ತುವರಿ ಮಾಡಿದಂತಹ ಕಟ್ಟೆ , ಕಾಂಪೋಂಡ್ ಗಳನ್ನು ತೆರವು ಗೊಳಿಸಲಾಯಿತು.ಸಾರ್ವಜನಿಕರು ಕಾಮಗಾರಿಯನ್ನು ಅಡ್ಡಿಪಡಿಸಿದಾಗ ಅವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಹಿಳಾ ಅಧಿಕಾರಿಯ ಕಾರ್ಯ ವೈಖರಿಯನ್ನು ಕಂಡಂತ ಪ್ರಗತಿಪರ ಚಿಂತಕರು ಸಂಘಟನೆಗಳು ,ಹಾಗೂ ಜಯಭಾರತ್ ಸಂಘಟನೆಯ ಅಧ್ಯಕ್ಷರಾದ ಜಾಹಾಂಗಿರ್ ರವರು ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ADM ಅಕ್ಬರ ಹಾಗೂ ಮೊನೇಶ್ ಕುರುಬರ , ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೈಯದ್ ಆಜಂ ಪಾಶ ಉಪಸ್ಥಿತರಿದ್ದರು.
3 ನೇ ಹಂತದ ನಗರೋತ್ಥಾನ ಕಾಮಗಾರಿ ಚಾಲನೆ
Please follow and like us: