3 ನೇ ಹಂತದ ನಗರೋತ್ಥಾನ ಕಾಮಗಾರಿ ಚಾಲನೆ 

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದಲ್ಲಿ 3ನೇ ಹಂತದ ನಗರೋತ್ಥಾನ ಕಾಮಗಾರಿ ಯನ್ನ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾತಿ ದರಗಿ ಚಾಲನೆ ನೀಡಿದರು.ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಮರು ಚಾಲನೆ ನೀಡುವ ಮೂಲಕ ಸ್ವಾತಿ ದರಗಿಯವರು ದಿಟ್ಟ ಹೆಜ್ಜೆಯನ್ನಇಟ್ಟಿದ್ದಾರೆ. ರಸ್ತೆಯ ಮೇಲೆ ಒತ್ತುವರಿ ಮಾಡಿದಂತಹ ಕಟ್ಟೆ , ಕಾಂಪೋಂಡ್ ಗಳನ್ನು ತೆರವು ಗೊಳಿಸಲಾಯಿತು.ಸಾರ್ವಜನಿಕರು ಕಾಮಗಾರಿಯನ್ನು ಅಡ್ಡಿಪಡಿಸಿದಾಗ ಅವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಹಿಳಾ ಅಧಿಕಾರಿಯ ಕಾರ್ಯ ವೈಖರಿಯನ್ನು ಕಂಡಂತ ಪ್ರಗತಿಪರ ಚಿಂತಕರು ಸಂಘಟನೆಗಳು ,ಹಾಗೂ ಜಯಭಾರತ್ ಸಂಘಟನೆಯ ಅಧ್ಯಕ್ಷರಾದ ಜಾಹಾಂಗಿರ್ ರವರು ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಂಚಾಯತ್  ಸದಸ್ಯರಾದ ADM ಅಕ್ಬರ ಹಾಗೂ ಮೊನೇಶ್ ಕುರುಬರ , ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೈಯದ್ ಆಜಂ ಪಾಶ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

 ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹುಟ್ಟುಹಬ್ಬ

Wed Jul 22 , 2020
ರಾಯಚೂರು  ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಅವರ ಹುಟ್ಟು ಹಬ್ಬದ ನಿಮಿತ್ತ ಕಾಂಗ್ರೆಸ್ ಮುಖಂಡರಿಂದ ಬಡ ರೋಗಿಗಳಿಗೆ ಮಾಸ್ಕ್ ಬ್ರೆಡ್ ಮತ್ತು ಬಾಳೆ ಹಣ್ಣು ವಿತರಣೆ ಮಾಡಲಾಯಿತು.ಈ ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ಪಿ ಪಂಪಾಪತಿ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ದೇವದುರ್ಗ ತಾಲೂಕಿನ ಅಭಿವೃದ್ಧಿ ಹರಿಕಾರರು ದಿನದಲಿತ ನಾಯಕರಿಗೆ 60 ನೇ ಹುಟ್ಟು […]

Advertisement

Wordpress Social Share Plugin powered by Ultimatelysocial