ಕಲಬುರ್ಗಿ:ಅಫಜಲಪುರ ತಾಲ್ಲೂಕಿನ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಅಂಗವಾಗಿ ಜನೇವರಿ 1ರಿಂದ ಜನೇವರಿ 30 ರ ವರೆಗೆ 118 ಹಳ್ಳಿಗಳಿಗೆ 30 ದಿನಗಳ ಪಾದಯಾತ್ರೆ ಮಣ್ಣೂರ ಗ್ರಾಮದಿಂದ ಪ್ರಾರಂಭವಾದ ಶಾಂತವೀರ ಶ್ರೀ ಗುರು ಮಳೆಂದ್ರ ಜ್ಯೋತಿ ರಥಯಾತ್ರೆ, ಸದ್ಭಾವನಾ ಪಾದಯಾತ್ರೆ ಹಾಗೂ “ದುಶ್ಚಟಗಳ ಬಿಕ್ಷೆ ಸದ್ಗುಣಗಳ ದೀಕ್ಷೆ” ಹಾಗೂ 25000 ಸಾವಿರ ರುದ್ರಾಕ್ಷಿ ಧಾರಣೆ ಹಮ್ಮಿಕೊಳ್ಳಲಾಗಿದ್ದು ಇಂದು ಮಂಗಳೂರ ಗ್ರಾಮಕ್ಕೆ ಬಂದು ತಲುಪಿದ್ದು ಸಸಿಗೆ ನೀರು ಹಾಕುವ ಮೂಲಕ ಸಮಾರಂಭ ನೆರವೇರಿಸಿದರು.ಈ ಸಂದರ್ಭದಲ್ಲಿ ಮಂಗಳೂರ ಗ್ರಾಮದ ಯುವಕರಿಗೆ ಶ್ರೀ ಮಳೇಂದ್ರ ಶಿವಾಚಾರ್ಯರು ರುದ್ರಾಕ್ಷಿ ಧಾರಣೆ ಮಾಡಿದರು ಇದೇ ವೇಳೆ ನೂರಾರು ಜನರು ಗುಟ್ಕಾ ತಂಬಾಕು ಮದ್ಯ ಶ್ರೀಗಳ ಜೋಳಿಗೆ ಹಾಕಿದರು ದುಶ್ಚಟಗಳ ತ್ಯಾಗ ಮಾಡಿದರು
ಈ ಸಂದರ್ಭದಲ್ಲಿ ಚಿದಾನಂದ ಮಠ,ಸಿದ್ದು ಶಿವೂರ, ಕಾಶಿನಾಥ್ ಪುಜಾರಿ ಹಾಗೂ ಮಂಗಳೂರ ಗ್ರಾಮಸ್ಥರು ಮಹಿಳೆಯರು ಇತರರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada