ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದ ಜೀರ್ಣೋದ್ಧಾರ ಕಾಮಗಾರಿಗೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೋಮವಾರ ಭೂಮಿಪೂಜೆ ನೆರವೇರಿಸಿದರು.ಶಾಸಕರ ಅನುದಾನದಡಿ ₹ 50 ಲಕ್ಷ ವೆಚ್ಚದಲ್ಲಿ ಈ ಮಠದ ಜೀರ್ಣೋದ್ಧಾರ ನಡೆಯಲಿದೆ ಎಂದು ಶಾಸಕ ದತ್ತಾತ್ರೇಯ ತಿಳಿಸಿದರು.ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ದೇವೇಂದ್ರ ಸ್ವಾಮೀಜಿ, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಾಮು ರೆಡ್ಡಿ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಅರವಿಂದ ಪೋದ್ದಾರ ಬೆಣ್ಣೆಶಿರೂರ, ಪಾಲಿಕೆ ಸದಸ್ಯ ಗುರುರಾಜ ಪಟ್ಟಣ, ಮುಖಂಡರಾದ ಬಸವರಾಜ ಪಂಚಾಳ ವಾಡಿ, ಸುಭಾಶ ಪಂಚಾಳ ಶಾಹಾಬಾದ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಇಂದಿರಾ ಬನಶೆಟ್ಟಿ, ಕೇಶವ ಸೀತನೂರ, ಚಂದ್ರಶೇಖರ ಪತ್ತಾರ, ಗಂಗಾಧರ ಪೋದ್ದಾರ, ಲಕ್ಷ್ಮೀಕಾಂತ ಸೀತನೂರ, ಅಭಿಲಾಷ ಹೇಮನೂರ, ಮಾರುತಿ ಕಮ್ಮಾರ, ಮಂಜು ಹಿರೋಳಿ, ಮೌನೇಶ ಬಡಿಗೇರ, ವಿಶ್ವನಾಥ ಪೋದ್ದಾರ, ಪ್ರಾಣೇಶ ಬಡಿಗೇರ, ರವೀಂದ್ರ ಪಂಚಾಳ, ಗಂಗಾಧರ ಮಹಾಗಾಂವ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada