ಕಪಿಲ್ ಶರ್ಮಾ ಶೋಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಇತ್ತೀಚೆಗೆ ತೆರೆಕಂಡ ಸಿನಿಮಾ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡವನ್ನು ಆಹ್ವಾನಿಸದೇ ಇದ್ದಕ್ಕಾಗಿ ಹಾಸ್ಯನಟ ಕಪಿಲ್ ಶರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದಾರೆ. ಈ ರೀತಿಯ ಯಾವುದೇ ಉದ್ದೇಶ ನನಗೆ ಇರಲಿಲ್ಲ ಎಂದು ಕಪಿಲ್ ಶರ್ಮಾ ಹೇಳಿದ್ದರೂ ಸಹ ಟ್ರಿಟರ್ನಲ್ಲಿ ಬಾಯ್ಕಾಟ್ ಕಪಿಲ್ ಶರ್ಮಾ ಎಂದು ಟ್ರೆಂಡ್ ಆಗುತ್ತಿದೆ.
ಆದರೆ ಇದೀಗ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅನುಪಮ್ ಖೇರ್, ಕಪಿಲ್ ಶರ್ಮಾ ತಮ್ಮ ಶೋಗೆ ಚಿತ್ರತಂಡವನ್ನು ಆಹ್ವಾನಿಸಿದ್ದರು. ಆದರೆ ನಾವೇ ಈ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದೆವು, 2 ತಿಂಗಳ ಹಿಂದೆಯೇ ಚಿತ್ರತಂಡಕ್ಕೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಅನುಪಮ್ ಖೇರ್ ಸ್ಪಷ್ಟನೆ ನೀಡುತ್ತಿರುವ ವಿಡಿಯೋವನ್ನು ಕಪಿಲ್ ಶರ್ಮಾ ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ ತಮ್ಮ ಶೋಗೆ ಆಹ್ವಾನಿಸಿದ್ದರೂ ಸಹ ಇದೊಂದು ಗಂಭೀರ ವಿಷಯವಾದ ಕಾರಣ ಹಾಸ್ಯ ಕಾರ್ಯಕ್ರಮದಲ್ಲಿ ಹಾಜರಾಗದೇ ಇರಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಪಿಲ್ ಶರ್ಮಾ ನನ್ನ ಮೇಲಿನ ಎಲ್ಲಾ ಸುಳ್ಳು ಆರೋಪಗಳನ್ನು ಸ್ಪಷ್ಟಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us:
Wed Mar 16 , 2022
ಅಕ್ಷಯ್ ಕುಮಾರ್, ಕೃತಿ ಸನೋನ್ ಅಭಿನಯದ ಬಚ್ಚನ್ ಪಾಂಡೆ ಶುಕ್ರವಾರ, ಮಾರ್ಚ್ 18 ರಂದು ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಸಾಹಸಮಯ ಹಾಸ್ಯವು 2014 ರ ತಮಿಳು ಚಲನಚಿತ್ರ ಜಿಗರ್ತಂಡದ ರೀಮೇಕ್ ಆಗಿದೆ, ಇದು ಸ್ವತಃ ಸ್ಫೂರ್ತಿ ಪಡೆದಿದೆ. 2006 ರ ದಕ್ಷಿಣ ಕೊರಿಯಾದ ಚಲನಚಿತ್ರ ಎ ಡರ್ಟಿ ಕಾರ್ನಿವಲ್. 2001 ರ ಅಜ್ಞಾತವಾಸ ಚಿತ್ರದ ನಂತರ ಈ ಚಿತ್ರದಲ್ಲಿ ಅಕ್ಷಯ್ […]