ಕಪಿಲ್‌ ಶೋ ಶರ್ಮಾಗೆ ಹೋಗದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ʼದಿ ಕಾಶ್ಮೀರ್‌ ಫೈಲ್ಸ್‌ʼ ನಟ ಅನುಪಮ್​ ಖೇರ್

ಕಪಿಲ್​ ಶರ್ಮಾ ಶೋಗೆ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಇತ್ತೀಚೆಗೆ ತೆರೆಕಂಡ ಸಿನಿಮಾ ʼದಿ ಕಾಶ್ಮೀರ್​ ಫೈಲ್ಸ್ʼ​​ ಚಿತ್ರತಂಡವನ್ನು ಆಹ್ವಾನಿಸದೇ ಇದ್ದಕ್ಕಾಗಿ ಹಾಸ್ಯನಟ ಕಪಿಲ್​ ಶರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಆಗಿದ್ದಾರೆ. ಈ ರೀತಿಯ ಯಾವುದೇ ಉದ್ದೇಶ ನನಗೆ ಇರಲಿಲ್ಲ ಎಂದು ಕಪಿಲ್​ ಶರ್ಮಾ ಹೇಳಿದ್ದರೂ ಸಹ ಟ್ರಿಟರ್​ನಲ್ಲಿ ಬಾಯ್ಕಾಟ್​​ ಕಪಿಲ್​ ಶರ್ಮಾ ಎಂದು ಟ್ರೆಂಡ್​ ಆಗುತ್ತಿದೆ.

ಆದರೆ ಇದೀಗ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅನುಪಮ್​ ಖೇರ್​​, ಕಪಿಲ್​ ಶರ್ಮಾ ತಮ್ಮ ಶೋಗೆ ಚಿತ್ರತಂಡವನ್ನು ಆಹ್ವಾನಿಸಿದ್ದರು. ಆದರೆ ನಾವೇ ಈ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದೆವು, 2 ತಿಂಗಳ ಹಿಂದೆಯೇ ಚಿತ್ರತಂಡಕ್ಕೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಅನುಪಮ್​ ಖೇರ್​ ಸ್ಪಷ್ಟನೆ ನೀಡುತ್ತಿರುವ ವಿಡಿಯೋವನ್ನು ಕಪಿಲ್​ ಶರ್ಮಾ ಹಂಚಿಕೊಂಡಿದ್ದಾರೆ. ಕಪಿಲ್​ ಶರ್ಮಾ ತಮ್ಮ ಶೋಗೆ ಆಹ್ವಾನಿಸಿದ್ದರೂ ಸಹ ಇದೊಂದು ಗಂಭೀರ ವಿಷಯವಾದ ಕಾರಣ ಹಾಸ್ಯ ಕಾರ್ಯಕ್ರಮದಲ್ಲಿ ಹಾಜರಾಗದೇ ಇರಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಶೇರ್​ ಮಾಡಿರುವ ಕಪಿಲ್​ ಶರ್ಮಾ ನನ್ನ ಮೇಲಿನ ಎಲ್ಲಾ ಸುಳ್ಳು ಆರೋಪಗಳನ್ನು ಸ್ಪಷ್ಟಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಚ್ಚನ್ ಪಾಂಡೆ ಬಿಡುಗಡೆಗೆ ಮುಂಚಿತವಾಗಿ, ಅಕ್ಷಯ್ ಕುಮಾರ್ ಅವರನ್ನು ಇತರ ನಟರಿಗೆ ಹೋಲಿಸುವ ಬಗ್ಗೆ ತೆರೆದುಕೊಳ್ಳುತ್ತಾರೆ!

Wed Mar 16 , 2022
ಅಕ್ಷಯ್ ಕುಮಾರ್, ಕೃತಿ ಸನೋನ್ ಅಭಿನಯದ ಬಚ್ಚನ್ ಪಾಂಡೆ ಶುಕ್ರವಾರ, ಮಾರ್ಚ್ 18 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಸಾಹಸಮಯ ಹಾಸ್ಯವು 2014 ರ ತಮಿಳು ಚಲನಚಿತ್ರ ಜಿಗರ್ತಂಡದ ರೀಮೇಕ್ ಆಗಿದೆ, ಇದು ಸ್ವತಃ ಸ್ಫೂರ್ತಿ ಪಡೆದಿದೆ. 2006 ರ ದಕ್ಷಿಣ ಕೊರಿಯಾದ ಚಲನಚಿತ್ರ ಎ ಡರ್ಟಿ ಕಾರ್ನಿವಲ್. 2001 ರ ಅಜ್ಞಾತವಾಸ ಚಿತ್ರದ ನಂತರ ಈ ಚಿತ್ರದಲ್ಲಿ ಅಕ್ಷಯ್ […]

Advertisement

Wordpress Social Share Plugin powered by Ultimatelysocial