ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಯುವ ನಟಿ ಕಾವ್ಯಾ ತಾಪರ್ ಅನ್ನು ನಿನ್ನೆ ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 17ರಂದು ತಡರಾತ್ರಿ ಕಾವ್ಯಾ ತಾಪರ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೆ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದರು.ಸ್ಥಳೀಯರ ದೂರಿನ ಆಧಾರದ ಮೇಲೆ ಸ್ಥಳಕ್ಕೆ ಬಂದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದರು.ಮಹಿಳಾ ಪೊಲೀಸ್ ಒಬ್ಬರ ಕೊರಳು ಪಟ್ಟಿ ಹಿಡಿದು ಜಗಳ ಮಾಡಿದ ಕಾವ್ಯಾ ತಾಪರ್ ಮಹಿಳಾ ಪೊಲೀಸ್‌ ಮೇಲೆ ಹಲ್ಲೆಗೆ ಸಹ ಯತ್ನಿಸಿದ್ದಾರೆ. ಹಾಗಾಗಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣ, ಅಪಘಾತ ಮಾಡಿದ ಪ್ರಕರಣ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದ್ದು ಹೀಗೆ ಹಲವು ದೂರುಗಳನ್ನು ಕಾವ್ಯಾ ವಿರುದ್ಧ ದಾಖಲಿಸಲಾಗಿದೆ. ಸೆಕ್ಷನ್ 353, 504, 427 ಗಳನ್ನು ಕಾವ್ಯಾ ಮೇಲೆ ಹೂಡಲಾಗಿದೆ.ಮುಂಬೈನವರೇ ಆಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು ಹಾಗೂ ಒಂದು ತಮಿಳು ಸಿನಿಮಾದಲ್ಲಿ. 2013 ರಲ್ಲಿ ‘ತತ್ಕಾಲ್’ ಹೆಸರಿನ ಕಿರು ಸಿನಿಮಾದ ಮೂಲಕ ನಟನೆ ಆರಂಭಿಸಿದ ಕಾವ್ಯಾ ಬಳಿಕ ತೆಲುಗಿನಲ್ಲಿ ‘ಈ ಮಾಯ ಪೇರೇಮಿಟೊ’, ತಮಿಳಿನಲ್ಲಿ ‘ಮಾರ್ಕೆಟ್ ರಾಜ ಎಂಬಿಬಿಎಸ್’, ತೆಲುಗಿನಲ್ಲಿ ‘ಒಕ ಮಿನಿ ಕಥಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳಿನ ವಿಜಯ್ ಆಂಟೊನಿ ಎದುರು ಹೊಸ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವೂದ್ ಇಬ್ರಾಹಿಂನ 'ಭಾರತದ ವಿರುದ್ಧ ವಿಶೇಷ ಘಟಕ'ವನ್ನು ಎನ್ಐಎ ತನಿಖೆ ನಡೆಸುತ್ತಿದೆ, ಹಿಟ್ ಲಿಸ್ಟ್ ರಾಜಕಾರಣಿಗಳು, ಉದ್ಯಮಿಗಳನ್ನು ಹೊಂದಿದೆ

Sat Feb 19 , 2022
  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ವಿಶೇಷ ಘಟಕವನ್ನು ರಚಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಇಬ್ರಾಹಿಂ ಅವರ ಹಿಟ್ ಲಿಸ್ಟ್‌ನಲ್ಲಿ ರಾಜಕಾರಣಿಗಳು ಹಾಗೂ ಪ್ರಭಾವಿ ಉದ್ಯಮಿಗಳ ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ. ಇಬ್ರಾಹಿಂ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆತನ ವಿಶೇಷ ಘಟಕವು ದೆಹಲಿ ಮತ್ತು ಮುಂಬೈಯನ್ನು ಕೇಂದ್ರೀಕರಿಸಿದೆ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ದಾಳಿಯನ್ನು ಯೋಜಿಸುತ್ತಿದೆ ಎಂದು […]

Advertisement

Wordpress Social Share Plugin powered by Ultimatelysocial