ಮುಂಬೈ: 2017 ರಲ್ಲಿ ಅನಿಲ್ ಕುಂಬ್ಳೆ ಜೊತೆಗೆ ವೈಮನಸ್ಯ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು.
ಅದೇ ಕೊಹ್ಲಿ ಇಂದೀಗ ಸೀಮಿತ ಓವರ್ ಗಳ ನಾಯಕತ್ವ ಕಳೆದುಕೊಂಡಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು ಕೊಹ್ಲಿಗೆ ಅಂದಿನ ಘಟನೆಯನ್ನು ನೆನಪಿಸಿದ್ದಾರೆ.
ಅಂದು ಅನಿಲ್ ಕುಂಬ್ಳೆಯನ್ನು ನಿಮಗೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಅಧಿಕಾರ ಉಪಯೋಗಿಸಿ ಕಿತ್ತೊಗೆದಿರಿ. ಇಂದು ಅದೇ ಸ್ಥಿತಿ ನಿಮಗೆ ಬಂದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕುಂಬ್ಳೆಯನ್ನು ಕಿತ್ತೊಗೆದು ರವಿಶಾಸ್ತ್ರಿಯಂತಹ ದುರ್ಬಲ ಕೋಚ್ ನ್ನು ತಂದಿರಿ. ಕೆಲವು ಕ್ರಿಕೆಟಿಗರೊಂದಿಗೆ ಮೈದಾನದಲ್ಲೂ ಕಿತ್ತಾಡಿದಿರಿ. ಇದೆಲ್ಲದಕ್ಕೂ ಈಗ ಬೆಲೆ ತೆರುತ್ತಿದ್ದೀರಿ ಎಂದು ಕೆಲವರು ಕೊಹ್ಲಿಯನ್ನು ಜರಿದಿದ್ದಾರೆ.
Please follow and like us:
Fri Dec 17 , 2021
ಪಾಕಿಸ್ತಾನದ ಮಾಜಿ ಕ್ರಿಕೆಟಿಗ , ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಸಚಿನ್ ತೆಂಡೂಲ್ಕರ್ ಜೊತೆಗಿನ ಒಂದು ಅಚಾನಕ್ ಘಟನೆ ಕುರಿತಾಗಿ ಮೆಲುಕು ಹಾಕಿದ್ದು, ಅಂದು ಸಚಿನ್ ತೆಂಡೂಲ್ಕರ್ ಏನಾದ್ರೂ ಗಾಯಗೊಂಡಿದ್ರೆ, ನನಗೆ ಜೀವನದಲ್ಲಿ ಮತ್ತೆ ಭಾರತದ ವೀಸಾ ಸಿಗುತ್ತಿರಲಿಲ್ಲ, ಭಾರತಕ್ಕೆ ಮತ್ತೆ ಬರಲು ಸಾಧ್ಯವಾಗ್ತಿರಲಿಲ್ಲ ಎಂದು ಸ್ಪೋರ್ಟ್ಸ್ಕ್ರೀಡಾ ಯೂಟ್ಯೂಬ್ ಚಾನೆಲ್ಗೆ ತಿಳಿಸಿದ್ದಾರೆ. ಈ ಘಟನೆ ನಡೆದಿದ್ದು 2007ರಲ್ಲಿ ಪಾಕಿಸ್ತಾನ ಭಾರತದ ಸಮಯದ ವೇಳೆಯಲ್ಲಿ, ಅವಾರ್ಡ್ ನೀಡುವ ವೇಳೆಯಲ್ಲಿ […]