ಲಂಕಾ ವಿರುದ್ಧ ಭಾರತಕ್ಕೆ 4 ವಿಕೆಟ್ ಗೆಲುವು

ಕೊಲ್ಕತ್ತ, ಜ.12-ಕೆ.ಎಲ್. ರಾಹುಲ್ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಇಂದು ಇಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಮೂಲಕ ಮೂರು ಪಂದ್ಯಗಳ ಪೈಕಿ ಭಾರತ 2-0 ಯಿಂದ ಸರಣಿ ಕೈವಶ ಮಾಡಿಕೊಂಡಿದೆ.
ಗೆಲುವಿಗೆ ಅಗತ್ಯವಿದ್ದ 216 ರನ್ ಗಳ ಬೆನ್ನಹತ್ತಿದ ಭಾರತ 43.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ರಾಹುಲ್, ಅಜೇಯ 63, ಹಾರ್ದಿಕ್ ಪಾಂಡ್ಯ 36, ಅಕ್ಸರ್ ಪಟೇಲ್ 21, ಶ್ರೇಯಸ್ ಅಯ್ಯರ್ 28, ಶಭ್ ಮನ್ ಗಿಲ್ 21, ರೋಹಿತ್ ಶರ್ಮಾ 17 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕೊಹ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರಾಹುಲ್ ಮತ್ತು ಪಾಂಡ್ಯ ಉತ್ತಮ ಜತೆಯಾಟ ತಂಡದ ಗೆಲುವಿಗೆ ಸಹಕಾರಿಯಾಯಿತು. ಲಂಕಾ ಪರ ಲಹಿರು ಕುಮಾರ ಹಾಗೂ ಕಸುನ್ ರಜಿತಾ ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್ ಗಳು 215 ರನ್ ಗಳಿಗೆ ಕಟ್ಟಿಹಾಕಿದರು.
ನುವಿಂದೂ ಫರ್ನಾಂಡೊ 50, ಕುಶಾಲ್ ಮೆಂಡೀಸ್ 34, ಡಿ.ವೆಲ್ಲಾಲ್ಗೆ 32,ಅವಿಷ್ಕಾ ಫರ್ನಾಂಡೊ 20, ಕರುಣ ರತ್ನೆ ಹಾಗೂ ರಜಿತಾ ತಲಾ 17ರನ್ ಗಳಿಸಿದರು.
ಭಾರತದ ಪರ ಶಮಿ ಹಾಗೂ ಕುಲ್ದೀಪ್ ತಲಾ 3, ಉಮ್ರಾನ್ ಮಲ್ಲಿಕ್ 2 ಹಾಗೂ ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಕ್ಸಲರಿಂದ ಸುಧಾರಿತ ಸ್ಪೋಟ

Fri Jan 13 , 2023
ಸಿಂಗ್‌ಭೂಮ್, ಜ.11- ಜಾರ್ಖಂಡ್‌ನ ಚೈಬಾಸಾದಲ್ಲಿ ಸುಧಾರಿತ ಸ್ಪೋಟಕ ಸ್ಫೋಟಿಸಿದ ಹಿನ್ನೆಲೆಯಲ್ಲಿ 5 ಮಂದಿ ಕೇಂದ್ರೀಯ ಗಡಿ ಭದ್ರತಾ ಪಡೆ ಸಿಬ್ಬಂದಿ- ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಚೈಬಾಸಾ ಪಟ್ಟಣದಲ್ಲಿ ನಕ್ಸಲರ ಶೋಧ ಮತ್ತು ಎನ್‌ಕೌಂಟರ್ ಸಮಯದಲ್ಲಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟದಲ್ಲಿ ಐವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.ಗಾಯಗೊಂಡ ಸಿಆರ್ ಪಿಎಫ್ ಸಿಬ್ಬಂದಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಭದ್ರತಾ […]

Advertisement

Wordpress Social Share Plugin powered by Ultimatelysocial