ಹಳ್ಳಿ ಜನರ ಸಮಸ್ಯೆ ಬಗೆಹರಿಸಲು ಜಾರಿಗೆ ತಂದಿರುವ ಯೋಜನೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮದಲ್ಲಿ ಜರಗಿತು.
ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹಾಗೂ ತಹಶಿಲ್ದಾರ ಪರಸುರಾಮ ಸತ್ತಿಗೇರಿ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸರ್ಕಾರದ ಕಾರ್ಯ,ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವರದಾನವಾಗಿದೆ ಗ್ರಾಮೀಣ ಜನರ ಸಮಸ್ಯೆಗಳ ಸ್ಪಂದನೆಗೆ ಸರ್ಕಾರ, ಜಿಲ್ಲಾಡಳಿತ ಆದ್ಯತೆ ನೀಡುತ್ತಿವೆ ಎಂದು ಹೇಳಿದರು.
ಮಾಶಾಸನ, ಆಯುಷ್ಮಾನ್ ಯೋಜನೆ, ರೇಷನ್ ಕಾರ್ಡ ಸಮಸ್ಯೆ, ಇತರೆ ಸಮಸ್ಯೆ ಬಗ್ಗೆ ಜನರು ಅಹವಾಲು ಸಲ್ಲಿಸಿದರು. ನಂತರ ಅಧಿಕಾರಿಗಳು ಸ್ಥಳದಲ್ಲೆ ಪರಿಹರಿಸಲು ಪ್ರಯತ್ನ ಮಾಡಿದರು.ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮೇಶ್ವರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: