ಕನ್ನಡತಿ ಕೊನೆಯ ಸಂಚಿಕೆ!

ನ್ನಡತಿ  ಧಾರಾವಾಹಿಯ ಕೊನೆಯ ಸಂಚಿಕೆ ಫೆಬ್ರವರಿ 3ರಂದು ಪ್ರಸಾರವಾಗಿ ಧಾರಾವಾಹಿ ಮುಕ್ತಾಯವಾಗುತ್ತಿದೆ. ಸಿಟಿಯ ಹುಡುಗ ಹಾಗೂ ಹಳ್ಳಿಯಿಂದ ಬಂದ ಕನ್ನಡ ಟೀಚರ್​ನ ಸುಂದರವಾದ ಪ್ರೇಮ ಕಥೆಯನ್ನು   ಕನ್ನಡ ಸೀರಿಯಲ್ ಪ್ರೇಕ್ಷಕರು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ.
ಸಕ್ಸಸ್​ಫುಲ್ ಆಗಿ ನಡೆದು ಬಂದ ಧಾರಾವಾಹಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲ ವರ್ಗದ ಜನರಿಗೂ ಮೆಚ್ಚುಗೆಯಾದ ಸೇರಿಯಲ್ ಇದು. ಅಗತ್ಯವಿದ್ದಷ್ಟೇ ಲವ್, ರೊಮ್ಯಾನ್ಸ್, ಡ್ರಾಮಾ ಸೇರಿಸಿದ್ದು ಕುಟುಂಬ  ಸಮೇತ ನೋಡಿ ಆನಂದಿಸಬಹುದಾಗಿದ್ದ ಈ ಧಾರಾವಾಹಿಯನ್ನು ಗಂಡು ಮಕ್ಕಳೂ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು ಎನ್ನುವುದು ವಿಶೇಷ.
ಇದೀಗ ಧಾರವಾಹಿ ಕೊನೆಯ ಹಂತದಲ್ಲಿದೆ. ಕೊನೆಯ ಎಪಿಸೋಡ್​ ಪ್ರಸಾರವಾಗುವ ಮೊದಲು ಸೀರಿಯಲ್ ಹೀರೋಯಿನ್ ರಂಜನಿ ರಾಘವನ್ ಅವರು ಭಾವುಕವಾದ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.
ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗ್ತಿದೆ. “ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ” ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ. ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪ್ರೀತಿಯಿಂದ, ರಂಜನಿ ರಾಘವನ್ ಎಂದು ಬರೆದು ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದಾದ್ಯಂತ 700 ಕೋಟಿ ಬಾಚಿದ ಪಠಾಣ್;

Fri Feb 3 , 2023
‘ಪಠಾಣ್’ ಚಿತ್ರವು ಬಾಲಿವುಡ್​ ಸ್ಟಾರ್ ಶಾರೂಖ್ ಖಾನ್​ ಪಾಲಿಗೆ ಬ್ಲಾಕ್​ಬಸ್ಟರ್​ ಚಿತ್ರವಾಗಿದೆ. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಥಿಯೇಟರ್​​ನಲ್ಲಿ ಭರ್ಜರಿ ರೆಸ್ಪಾನ್ಸ್​ ಕಾಣ್ತಿದ್ದು, ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಜನವರಿ 25 ರಂದು ತೆರೆಕಂಡ ಈ ಚಿತ್ರವು ವಿಶ್ವದಾದ್ಯಂತ ಒಟ್ಟೂ 700 ಕೋಟಿ ಹಣವನ್ನು ಗಳಿಸಿದೆ. ಇನ್ನು ಭಾರತ ಒಂದರಲ್ಲೇ 400 ಕೋಟಿ ಬಾಕ್ಸ್​ ಆಫೀಸ್​ ಕ್ಲಬ್ ಸೇರಿದೆ. ಹಾಗೆ ನೋಡಿದ್ರೆ ಚಿತ್ರತಂಡದ ಎಲ್ಲಾ ನಿರೀಕ್ಷೆಗಳನ್ನೂ ದೀಪಿಕಾ ಪಡುಕೋಣೆ ಮತ್ತು […]

Advertisement

Wordpress Social Share Plugin powered by Ultimatelysocial