ಲಾರಿಯ ಟಯರ್ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ (Road accident) ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ಮಂಗಳವಾರ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್ ಅವರು ಲಾರಿ ಚಾಲಕರು.ಮಂಗಳವಾರ ವಾಹನ ಓಡಿಸುವಾಗ ಲಾರಿ ಟಯರ್ ಯಾಕೋ ಹೀಟ್ ಆದ ಹಾಗಿದೆಯಲ್ವಾ ಅನಿಸಿತು. ಚೆಕ್ ಮಾಡಿಯೇ ಬಿಡೋಣ ಎಂದು ಅವರು ಲಾರಿ ನಿಲ್ಲಿಸಿ, ಇಳಿದು ಚೆಕ್ ಮಾಡಲು ಶುರು ಮಾಡಿದರು. ಹೀಗೆ ಚೆಕ್ ಮಾಡುವ ವೇಳೆಯೇ ಟಯರ್ ಸ್ಫೋಟಗೊಂಡು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಸಾಮಾನ್ಯವಾಗಿ ಕೆಲವೊಮ್ಮೆ ವಾಹನ ಚಲಿಸುವಾಗಲೇ ಟಯರ್ ಸ್ಫೋಟಗೊಳ್ಳುವುದು ಇದೆ. ಹಾಗಾದಾಗ ಮತ್ತೊಂದು ಟಯರ್ನ ಆಧಾರದಲ್ಲಿ ವಾಹನ ಮುಂದಕ್ಕೆ ಚಲಿಸಲು ಅವಕಾಶವಿರುತ್ತದೆ. ಆದರೆ, ಇಲ್ಲಿ ಟಯರ್ ಬಿಸಿಯಾಗಿದೆಯೇನೋ ಅಂತ ಅನಿಸಿದ್ದೇ ವೆಂಕಟೇಶ್ ಪಾಲಿಗೆ ಮೃತ್ಯುವಾಗಿದೆ. ಅವರು ಅದನ್ನು ಪರಿಶೀಲಿಸಲು ಇಳಿದಿದ್ದೇ ಸಾವಿಗೆ ಆಹ್ವಾನ ನೀಡಿದಂತಾಗಿದೆ!ಹದಿಹರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಆಗುವುದು ಸಹಜ. ಆದರೆ ಪ್ರೀತಿಯಲ್ಲಿ ಮುಳುಗಿದವರಿಗೆ ಪ್ರಪಂಚವೇ ಕುರುಡಾಗಿ ಬಿಟ್ಟಿರುತ್ತದೆ. ಹೀರೋ-ಹೀರೋಯಿನ್ ಮೂಡ್ನಲ್ಲಿರುವ ಕೆಲವರು ಬೈಕ್ನಲ್ಲಿ (Lovers Scooter Ride) ಕೂತು ಫಿಲ್ಮಿ ಸ್ಟೈಲ್ನಲ್ಲಿ ರೊಮ್ಹಾನ್ಸ್ ಮಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.ಇಲ್ಲಿನ ಆರ್ ಆರ್ ನಗರ ಮುಖ್ಯರಸ್ತೆಯಲ್ಲಿ ಯುವತಿಯೊಬ್ಬಳು ಸ್ಕೂಟರ್ ಓಡಿಸುತ್ತಿದ್ದರೆ ಹಿಂದೆ ಕುಳಿತಿದ್ದ ಯುವಕ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾನೆ. ನಡು ರೋಡಲ್ಲೇ ಹೊತ್ತು ಗೊತ್ತು ಮರೆತು ಮುತ್ತು ಕೊಟ್ಟುಕೊಂಡಿರುವ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೊವೊಂದು ವೈರಲ್ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada