ಕೊಪ್ಪಳ: ಕನಕಗಿರಿ ತಾಲೂಕು ನವಲಿ ಗ್ರಾಮದ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಕಾರಟಗಿ ಪಟ್ಟಣದ ಇಂದಿರಾನಗರದ ಯಮನೂರಪ್ಪ ಸಿಂಧನೂರು(55) ಮತ್ತು ತಿಪ್ಪಮ್ಮ (45) ಮೃತ ದುರ್ದೈವಿಗಳು.
ಕಾರಟಗಿಯ ಯುವಕನಿಗೆ ಮದುವೆ ನಿಶ್ಚಯ ಮಾಡಲೆಂದು ಕಾರಟಗಿಯಿಂದ ಕನಕಗಿರಿಯ ಶಿರವಾರ ಗ್ರಾಮಕ್ಕೆ ಟ್ರ್ಯಾಕ್ಟರ್ನಲ್ಲಿ 15ಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದರು.
ಮಾರ್ಗಮಧ್ಯೆ ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕಾರಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us:
Fri Mar 11 , 2022
ನವದೆಹಲಿ: ವಾಟ್ಸಪ್ ಅಂತಹ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದ್ದು, ಯಾರಿಗೂ ತಿಳಿದಿಲ್ಲ. ವಿಶ್ವದ ಅತ್ಯಂತ ಜನಪ್ರಿಯ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ವಾಟ್ಸಪ್ ಅನ್ನು ಸ್ಮಾರ್ಟ್ಫೋನ್ಗಳು ಮತ್ತು ಡೆಸ್ಕ್ಟಾಪ್ಗಳು ಅಥವಾ ಲ್ಯಾಪ್ಟಾಪ್ಗಳಲ್ಲಿ ಬಳಸಲಾಗುತ್ತದೆ ಮತ್ತು ಆ ಆವೃತ್ತಿಯನ್ನು ‘WhatsApp ವೆಬ್’ ಎಂದು ಕರೆಯಲಾಗುತ್ತದೆ.ಇತ್ತೀಚೆಗೆ, WhatsApp ತನ್ನ ವೆಬ್ ಆವೃತ್ತಿಗೆ ವಿಚಿತ್ರವಾದ ನವೀಕರಣವನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಬಳಕೆದಾರರು ‘ಟ್ರಾಫಿಕ್ ಲೈಟ್’ ಅನ್ನು ಎದುರಿಸುತ್ತಾರೆ. ಈ ನವೀಕರಣದಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿಸಿ. […]