ವಿಜಯಪುರ: ಶ್ರೀ ಜ್ಞಾನಯೋಗಾಶ್ರಮದ ಮಹಾಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ 19ನೇ ವಯಸ್ಸಿನಲ್ಲೇ ಅದ್ಭುತವಾದ ಪುಸ್ತಕವೊಂದನ್ನು ಪ್ರಕಟಿಸಿದ್ದರು. ಆದರೆ, ಅವರು ಅದನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಲಿಲ್ಲ. ಬದಲಾಗಿ ತಮ್ಮ ಗುರುಗಳ ಹೆಸರಿನಲ್ಲಿ ಪ್ರಕಟಿಸಿದರು. ಅಷ್ಟು ಹೊತ್ತಿಗೇ ಅವರಿಗೆ ತಾನಲ್ಲ, ತನದಲ್ಲ ಎಂಬ ಅದ್ಭುತ ಪರಿಕಲ್ಪನೆ ಮನದಟ್ಟಾಯಿತು. ಆವತ್ತು ಅವರು ಪ್ರಕಟಿಸಿದ ಪುಸ್ತಕದ ಹೆಸರು ಸಿದ್ಧಾಂತ ಶಿಖಾಮಣಿ. ಇದು ಅವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರವಚನಗಳ ಸಂಗ್ರಹ.
ವಿಜಯಪುರ
ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ
ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ ಸಿದ್ಧಗೊಂಡಪ್ಪ ಎಂಬ ಬಾಲಕ ಆಗಲೇ ಮಲ್ಲಿಕಾರ್ಜುನ ಸ್ವಾಮಿಗಳ ಗಮನ ಸೆಳೆದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಈ ಬಾಲಕನನ್ನು ಕರೆದೊಯ್ಯ ತೊಡಗಿದರು. ಅಧ್ಯಾತ್ಮ ಶಕ್ತಿ ನಿಧಾನಕ್ಕೆ ಡಗಿತ್ತು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು ಮಲ್ಲಿಕಾರ್ಜುನ ಶ್ರೀಗಳು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಲಾಪುರ ವಿಶ್ವವಿದ್ಯಾನಿಲಯದಿಂದ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada