ಕಾರ್ಮಿಕರಿಗಾಗಿ ಎರಡು-ಮೂರು ಬಿಲ್ ಮಂಡನೆ- ಸಚಿವ ಶಿವರಾಮ್ ಹೆಬ್ಬಾರ್

ಬಡವರ ಪರವಾಗಿ ಕೆಲಸ ಮಾಡಬೇಕಾದರೆ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಕೊರೊನಾ ತುರ್ತು ಸಂದರ್ಭದಲ್ಲಿ ಅಭಿವೃದ್ದಿ ಕೆಲಸಗಳು ಕುಂಟಿತವಾಗಬಾರದು. ಸಾರ್ವಜನಿಕರು ಕೊರೊನಾ ಜೊತೆ ಜೊತೆಗೆ ಬದುಕುವುದನ್ನು ಕಲಿಯಬೇಕು. ಕೋವಿಡ್-೧೯ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕೊಡುವ ಪರಿಹಾರ ಧನ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಹಾಗೂ ಬಡವರಿಗೆ ಕೊಡುವ ಸೌಲಭ್ಯಗಳಲ್ಲಿ ಯಾವುದೇ ಲೋಪದೋಷಗಳು ಆಗಬಾರದು. ಕಾರ್ಮಿಕರ ಬದ್ಧತೆ ದೃಷ್ಟಿಯಿಂದ ಅಸಂಘಟಿತ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸೇರಿಸಲು ಮುಂದಿನ ಅಧಿವೇಶನದಲ್ಲಿ ಎರಡು ಮೂರು ಬಿಲ್ಲುಗಳನ್ನು ಮಂಡಿಸಲಾಗುತ್ತದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಗಿಡ ಬೆಳೆಸುವುದರಿಂದ ಅರಣ್ಯೀಕರಣವಾಗುವುದು-ಶಾಸಕ ಶಿವಲಿಂಗೇಗೌಡ

Tue Jul 7 , 2020
ಗಿಡಗಳನ್ನು ಬೆಳೆಸುವುದರಿಂದ ಅರಣ್ಯೀಕರಣವಾಗುವುದು, ಮಳೆ ಬರುವುದು, ರೈತರುಗಳಿಗೆ ಆದಾಯ ಬರುವುದು ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸೀಕೆರೆಯಲ್ಲಿ ರೈತರಿಗೆ ವಿವಿಧ ಕಾಡು ಜಾತಿಯ ಸಸಿಗಳನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ೬೫ ಸಾವಿರ ಏಕರೆ ರಿಜರ್ವ್ ಅರಣ್ಯ ಇದ್ದು ಮರ ಗಿಡ ಬೆಳೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಈ ಸಂದರ್ಭ ದಲ್ಲಿ ವಲಯ ಅರಣ್ಯಧಿಕಾರಿ ನಂದಕುಮಾರ್ ತೋಟಗಾರಿಕೆ ಇಲಾಖೆ ಬೋರೇಗೌಡ. ಜಲಾಯಾನ ಇಲಾಖೆಯ ಲಕ್ಷ್ಮಿಕಾಂತ್ ಚಂದ್ರಪ್ಪ ಗ್ರಾ.ಪಂ.ಸದಸ್ಯರಾದ ನಿತ್ಯಾನಂದ, […]

Advertisement

Wordpress Social Share Plugin powered by Ultimatelysocial