ಚಾಮರಾಜನಗರ: ಕೊರೋನಾ ಕಾರಣದಿಂದಾಗಿ ಮೃತಪಟ್ಟ ಗೆಳೆಯನ ಪತ್ನಿಯಾನೆ ಮದುವೆಯಾದ!

ಚಾಮರಾಜನಗರ: ಕೊರೋನಾ ಕಾರಣದಿಂದಾಗಿ ಮೃತಪಟ್ಟ ಗೆಳೆಯನ ಪತ್ನಿಯ ಮದುವೆಯಾಗುವ ಮೂಲಕ ಸ್ನೇಹಿತ ಮಾದರಿ ನಡೆ ಅನುಸರಿಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಚಾಮರಾಜನಗರ ತಾಲೂಕಿನ ನಂಜದೇವನಪುರ ನಿವಾಸಿ ಲೋಕೇಶ್ ಅವರು ವಿಧವೆಗೆ ಬಾಳು ಕೊಟ್ಟವರು.ಪತಿ ಚೇತನ್ ಕುಮಾರ್ ಅವರನ್ನು ಕಳೆದುಕೊಂಡಿದ್ದ ಅಂಬಿಕಾ ಅವರನ್ನು ಲೋಕೇಶ್ ಮದುವೆಯಾಗಿದ್ದಾರೆ.ಮೃತ ಚೇತನ್ ಕುಮಾರ್ 8 ವರ್ಷದ ಹಿಂದೆ ಅಂಬಿಕಾ ಅವರನ್ನು ಮದುವೆಯಾಗಿದ್ದು, ಕೊರೋನಾ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಪತಿ ಕಳೆದುಕೊಂಡ ಅಂಬಿಕಾ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಚೇತನ್ ಕುಮಾರ್ ಸ್ನೇಹಿತ ಲೋಕೇಶ್ ಅಂಬಿಕಾ ಅವರನ್ನು ಮದುವೆಯಾಗುವ ಬಗ್ಗೆ ಪ್ರಸ್ತಾಪಿಸಿದ್ದಾರೆ.ಮನೆಯವರ ಒಪ್ಪಿಗೆಯೊಂದಿಗೆ ಅಂಬಿಕಾ ಮತ್ತು ಅವರಿರ 7 ವರ್ಷದ ಮಗನಿಗೆ ಆಸರೆಯಾಗುವ ನಿಟ್ಟಿನಲ್ಲಿ ಮದುವೆಯಾಗಿದ್ದಾರೆ. ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲೋಕೇಶ್ ಅವರ ಮಾದರಿ ಕಾರ್ಯಕ್ಕೆ ಕುಟುಂಬದವರು, ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ: ಕರೋನಾ ಲಸಿಕೆಗೆ ಆಧಾರ್ ಕಾರ್ಡ್ ಕಡ್ಡಾಯವಾಗುವುದಿಲ್ಲ ಎಂದ ಸುಪ್ರೀಂ ಕೋರ್ಟ್ ̤

Tue Feb 8 , 2022
ನವದೆಹಲಿ: ಕರೋನಾ ಲಸಿಕೆಗೆ ಆಧಾರ್ ಕಾರ್ಡ್ ಕಡ್ಡಾಯವಾಗುವುದಿಲ್ಲ ಎಂದ ಸುಪ್ರೀಂ ಕೋರ್ಟ್, ಎಲ್ಲಾ ಅಧಿಕಾರಿಗಳಿಗೆ ಕರೋನಾ ಲಸಿಕೆಗಾಗಿ ಆಧಾರ್ ಕಾರ್ಡ್‌ಗೆ ಒತ್ತಾಯಿಸದಂತೆ ಸೂಚನೆ ನೀಡಿದೆ .ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯಕಾಂತ್ ಸಿದ್ಧಾರ್ಥ್ ಶಂಕರ್ ಶರ್ಮಾ ಅವರು ಕರೋನಾ ಲಸಿಕೆಯನ್ನು ಅನ್ವಯಿಸಲು ಗುರುತಿನ ಚೀಟಿಯ ಏಕೈಕ ರೂಪವಾಗಿ ಆಧಾರ್ ಅನ್ನು ಒತ್ತಾಯಿಸಬಾರದು, ಆದರೆ ಇತರ ಗುರುತಿನ ದಾಖಲೆಗಳನ್ನು ಸ್ವೀಕರಿಸಬೇಕು ಎಂದು ನಿರ್ದೇಶಿಸಿದ್ದಾರೆ.ಅಂದರೆ, ಆಧಾರ್ ಹೊರತುಪಡಿಸಿ, ಜನರು ಪಾನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ […]

Advertisement

Wordpress Social Share Plugin powered by Ultimatelysocial