ಮಾಜಿ ಶಾಸಕ ರಾಮದಾಸ್ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಜನತೆ ಪ್ರಬುದ್ಧರು, ಪ್ರಜ್ಞೆವಂತರು, ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡುವ ನಾಯಕರನ್ನು ಅರಿಸುವುದರಲ್ಲಿ ಆಲೋಚನ ಶಕ್ತಿ ಇರುವಂತವರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ರವರು ಒಂದು ಆದರ್ಶಗಳನ್ನು ಇಟ್ಟುಕೊಂಡು, ಅನೇಕ ಹೋರಾಟಗಳನ್ನು ಮಾಡಿ ಸತತ ಪ್ರಯತ್ನದಿಂದ bsp ಮೂಲಕ ಗೆದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡರು,ಬಿಜೆಪಿ ಕೊಟ್ಟಂತ ಅಭಿವೃದ್ಧಿಯನ್ನ ಕ್ಷೇತ್ರಕ್ಕೆ ಒದಗಿಸುವುದರಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ…
ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಎನ್. ಮಹೇಶ್ ರವರಿಗೆ ಇರುವಂತ ಕಾಳಜಿಯನ್ನು ಗುರುತಿಸಿ,
ಬಿಜೆಪಿ ಕೊಟ್ಟಿರುವಂತ ಅಭಿವೃದ್ಧಿ ಯೋಜನೆಗಳನ್ನ ಮತದಾರರಿಗೆ ಮನದಟ್ಟು ಮಾಡಿ ಮಹೇಶ್ ರವನ್ನ ಅತ್ಯಾಧಿಕಾ ಮತಗಳಿಂದ ಗೆಲ್ಲಿಸಲು ಎಲ್ಲರು ಶ್ರಮಿಸಬೇಕಾಗಿದೆ..
ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್. ಮಹೇಶ್ ರವನ್ನು ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲಿದೆ,
ಆದ್ದರಿಂದ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮನದಟ್ಟು ಮತ ಗಳಿಸುವ ಕೆಲಸವನ್ನು ಮಾಡಬೇಕಾಗಿದೆ, ನಾನು ಕೂಡ ಕೊಳ್ಳೇಗಾಲ ಕ್ಷೇತ್ರದಲ್ಲಿ ಉಳಿದು ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದೇನೆ ಎಂದರು.
https://play.google.com/store/apps/details?id=com.speed.newskannada