ಇಲ್ಲಿ ಮೃತಪಟ್ಟಿರುವ ತೇಜಸ್ವಿನಿ ಮಾನ್ಯತಾ ಟೆಕ್ ಪಾರ್ಕ್ ನ ಮೋಟೋರೋಲಾ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ.
ಸಣ್ಣಪುಟ್ಟ ಗಾಯಗೊಂಡು ಬಚಾವಾಗಿರೋ ಲೋಹಿತ್ ಕುಮಾರ್ ವಿಜಯನಗರದ ಟೆಕ್ಸೆಲ್ಲಾ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.
ಪ್ರತಿದಿನ ತಮ್ಮಿಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್ ಗೆ ಕರೆದೊಯ್ತಿದ್ದ ದಂಪತಿ.
ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಬೇಬಿ ಸಿಟ್ಟಿಂಗ್ ಗೆ ಕೂರುಸಿ ಕೆಲಸಕ್ಕೆ ತೆರಳ್ತಿದ್ರು.
ಇಂದೂ ಕೂಡ ಹೊರಮಾವಿನ ಅಪಾರ್ಟ್ಮೆಂಟ್ ನಿಂದ ಬೈಕ್ ನಲ್ಲಿ ತೆರಳಿದ್ದ ದಂಪತಿ.
ಆದ್ರೆ, ನಾಗಾವರದ ಬಳಿ ಬರ್ತಿದ್ದಂತೆ ಮೆಟ್ರೋ ಪಿಲ್ಲರ್ ಕುಸಿದಿದೆ.
ಘಟನೆಯಲ್ಲಿ ಎರಡುವರೆವರ್ಷದ ವಿಹಾನ್ ಹಾಗೂ ತಾಯಿ ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಗೊಂಡಿರೋ ಲೋಹಿತ್ ಗದಗ ಮೂಲದವರು.
ನಿವೃತ್ತ ನಗರಾಭಿವೃದ್ಧಿ ಕಮೀಷನರ್ ವಿಜಯ್ ಸುಲಾಖೆಯವರ ಮಗ ಲೋಹಿತ್ ಕುಮಾರ್.
https://play.google.com/store/apps/details?id=com.speed.newskannada