ಲಕ್ಷ್ಮೇಶ್ವರ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ರಾಮಣ್ಣ ಲಮಾಣಿ ಕೊರೋನದಿಂದ ಪಟ್ಟ ಮೃತಪಟ್ಟ ಕುಟುಂಬಗಳಿಗೆ ಸರಕಾರದಿಂದ ಬಂದ ಪರಿಹಾರ ಧನ 1 ಲಕ್ಷ ರೂಪಾಯಿಯ ಚೆಕ್ಕನ್ನು ಕೊರೊನದಿಂದ ಮೃತಪಟ್ಟ ಕುಟುಂಬಕ್ಕೆ ವಿತರಿಸಿದರು.
ತಾಲೂಕಿನಲ್ಲಿ ಕೊರೋನ ಸೊಂಕಿನಿಂದ 69 ಕುಟುಂಬಗಳ ಪೈಕಿ ಅದರಲ್ಲಿ ಸದ್ಯಕ್ಕೆ 29 ಜನರು ಮೃತಪಟ್ಟವರಿಗೆ ಪರಿಹಾರ ಬಂದಿದೆ. ಗದಗ ಜೀಮ್ಸ್ ನಲ್ಲಿ ಅಧಿಕೃತವಾಗಿ ಬಂದ ಮಾಹಿತಿ ಪ್ರಕಾರ 29 ಕುಟುಂಬಗಳಿಗೆ ಪರಿಹಾರ ಚೆಕ್ ಬಂದಿದೆ ಅದರಲ್ಲಿ 17 ಕುಟುಂಬ ಬಿಪಿಎಲ್,11 ಎ,ಪಿ,ಎಲ್, 1 ವಾರಸದಾರರ ಸರ್ಟಿಫಿಕೇಟ್ ಅಡಚಣೆ ಇರುವುದರಿಂದ ಬಂದಿಲ್ಲ ಒಟ್ಟಾರೆ ಬಿಪಿಎಲ್ ಕಾರ್ಡಗಳ ಒಂದು ಲಕ್ಷ ಪರಿಹಾರ ಬಂದಿದೆ ಬಿಪಿಎಲ್ ಕುಟುಂಬಕ್ಕೆ ಎಷ್ಟು ಪರಿಹಾರ ಸಿಗುತ್ತೆ ಮಾಹಿತಿ ಇನ್ನೂ ಬಂದಿಲ್ಲ ಉಳಿದ ಕುಟುಂಬಗಳಿಗೆ ಹಂತ ಹಂತವಾಗಿ ಸರ್ಕಾರದಿಂದ ಪರಿಹಾರ ಬರುತ್ತದೆ ಎಂದು ಅಧಿಕೃತ ಮಾಹಿತಿ ಬಂದಿರುತ್ತದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಕೊರೋನದಿಂದ ಮೃತಪಟ್ಟ ಕುಟುಂಬಕ್ಕೆ ಈಗಾಗಲೇ ತಾಲೂಕಿನಲ್ಲಿ 69ಕುಟುಂಬಗಳಿಗೆ ಪರಿಹಾರಕ್ಕೆ ಮನವಿ ಮಾಡಿದೆ ಅದರಲ್ಲಿ 29 ಕುಟುಂಬಗಳಿಗೆ ಪರಿಹಾರ ಬಂದಿದೆ ಮುಂದಿನ ದಿನಮಾನಗಳಲ್ಲಿ ಕ್ಷೇತ್ರದ ಶಿರಹಟ್ಟಿ ಮುಂಡರಗಿ ಭಾಗಗಳಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.ನಂತರ ಮಾತನಾಡಿದ ತಹಶಿಲ್ದಾರ ಭ್ರಮರಾಂಭ ಗುಬ್ಬಿಶೇಟ್ಟಿ ತಾಲೂಕಿನಲ್ಲಿ 69 ಕುಟುಂಬಗಳು ಮೃತಪಟ್ಟ ಪಟ್ಟಿದ್ದಾರೆ ಅದರಲ್ಲಿ ಈಗಾಗಲೇ 29 ಕುಟುಂಬಗಳ ಕುಟುಂಬದ ಪರಿಹಾರ ಚೆಕ್ ಬಂದಿದೆ ಮುಂದಿನ ದಿನಗಳಲ್ಲಿಉಳಿದ ಕುಟುಂಬಕ್ಕೆ ಪರಿಹಾರ ವಿತರಿಸಲಾಗುವುದು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada