ನವದೆಹಲಿ: ಕೀನ್ಯಾದ ಮಾಜಿ ಪ್ರಧಾನಿಯವರ ಪುತ್ರಿಯೊಬ್ಬರಿಗೆ, ಕೇರಳದ ನಾಟಿ ವೈದ್ಯ ಚಿಕಿತ್ಸೆಯ ಮೂಲಕ, ಚಿಕಿತ್ಸೆ ನೀಡಿ, ಕಣ್ಣಿನ ದೃಷ್ಠಿ ಮರಳಿ ಭರಿಸಲಾಗಿದೆ. ಈ ವ್ಯವಸ್ಥೆ ಕಲ್ಪಿಸಿಕೊಟ್ಟಂತ ಪ್ರಧಾನಿ ನರೇಂದ್ರ ಮೋದಿಯವರಿಗೆ , ಕೀನ್ಯಾ ಮಾಜಿ ಪ್ರಧಾನಿ ಧನ್ಯವಾದ ಅರ್ಪಿಸಿದ್ದಾರೆ.ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಂತ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿ ರೋಸ್ ಮೇರಿಗೆ 2017ರಲ್ಲಿ ನೈರೋಬಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ಶಸ್ತ್ರ ಚಿಕಿತ್ಸೆಯಿಂದಾಗಿ ಮಾಜಿ ಪ್ರಧಾನಿಯವರ ಪುತ್ರಿ ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿದ್ದಳು.ಹಲವರ ಮಾಹಿತಿಯ ಮೇರೆಗೆ 2019ರಲ್ಲಿ ಕೇರಳದ ಕೂಥಟ್ಟುಕುಲಂನಲ್ಲಿರುವಂತ ಆಯುರ್ವೇದ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇಲ್ಲಿನ ಆಯುರ್ವೇದ ಚಿಕಿತ್ಸೆಯ ಬಳಿಕ, ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿ ರೋಸ್ ಮೇರಿಗೆ ಕಣ್ಣಿನ ದೃಷ್ಠಿ ಮರಳಿ ಬಂದಿದೆ.ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಒಡಿಂಗಾ ಅವರು, ಆಯುರ್ವೇದ ಚಿಕಿತ್ಸೆಯಿಂದಾಗಿ ನನ್ನ ಮಗಳ ಕಣ್ಣಿನ ದೃಷ್ಠಿ ಮರಳಿ ಬಂದಿದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತಿದೆ. ಈ ವಿಧಾನವನ್ನು ಆಫ್ರೀಕಾದಲ್ಲಿಯೂ ಪರಿಚಯಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡಿದ್ದಾರೆ. ಜೊತೆಗೆ ಈ ಆಯುರ್ವೇದ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada