ಮೋದಿ ಆಗಮನ ಹಿನ್ನೆಲೆ ಸುಧಾರಣೆ ಕಾಣುತ್ತಿರುವ ರಸ್ತೆಗಳು!

ಜ.12ರಿಂದ16ರವರೆಗೆ ಧಾರವಾಡದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಮೋದಿ ಆಗಮನ ಹಿನ್ನೆಲೆ ಧಾರವಾಡದ ರಸ್ತೆಗಳಿಗೆ ಸುಧಾರಣೆ ಭಾಗ್ಯ ದೊರೆತಿದೆ. ಯುವಜನೋತ್ಸವ ನೆಪಕ್ಕಾದರೂ ಧಾರವಾಡದಲ್ಲಿ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ… ಪ್ರಧಾನಿ ನರೇಂದ್ರ ಮೋದಿಯಿಂದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಆಗಲಿದೆ.. ಯುವಜನೋತ್ಸವಕ್ಕೆ ಹೊರ ರಾಜ್ಯದಿಂದ 7ಸಾವಿರಕ್ಕೂ ಪ್ರತಿನಿಧಿಗಳು ಆಗಮಿಸಲಿದ್ದಾರೆ… ಹೀಗಾಗಿ ಯಾವತ್ತೂ ಇಲ್ಲದ ರಸ್ತೆಗಳ ಸುಧಾರಣೆಗೆ ಜಿಲ್ಲಾಡಳಿತ ಮುಂದಾಗಿದೆ…ತಗ್ಗು ದಿನ್ನೆಗಳಿಂದ ನಿತ್ಯ ವಾಹನ ಸವಾರರ ಜೀವ ಹಿಂಡುತ್ತಿದ್ದ ಧಾರವಾಡದ ಪ್ರಮುಖ ರಸ್ತೆಗಳು ಇದೀಗ ಯುವಜನೋತ್ಸವ ನೆಪದಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ದುರಸ್ತಿ ಭಾಗ್ಯ ದೊರೆತಿದೆ. ಧಾರವಾಡದ ಕರ್ನಾಟಕ ವಿವಿ, ಕರ್ನಾಟಕ ಕಾಲೇಜು ಸೇರಿ ಏಳರಿಂದ ಎಂಟು ವೇದಿಕೆಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹಾಗಾಗಿ ನಗರದ ಕಾಲೇಜು ರಸ್ತೆ, ಆಲೂರು ವೆಂಕಟರಾವ್ ಭವನ, ಕರ್ನಾಟಕ ವಿವಿ ಸೇರಿ ಕಾರ್ಯಕ್ರಮಗಳು ನಡೆಯುವ ಮಾರ್ಗದಲ್ಲಿ ಜಿಲ್ಲಾಡಳಿತದಿಂದ ಡಾಂಬರ್ ಹಾಕುವ ಕಾರ್ಯ ನಡೆಯುತ್ತಿದೆ..ಇಷ್ಟು ದಿನ ಕಣ್ತೆರೆಯದ ಜನಪ್ರತಿನಿಧಿಗಳು, ಆಡಳಿತ ವರ್ಗ ಈಗ ಯುವಜನೋತ್ಸವ ನೆಪಕ್ಕಾದರೂ ಗುಂಡಿಗಳಿಗೆ ತೆಪೆ ಹಚ್ಚುವ ಕೆಲಸ ಮುಂದಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಯ್ಯಪ್ಪ ಸ್ವಾಮಿ ಭಕ್ತರ ವಾಹನ ಅಪಘಾತ!

Wed Jan 4 , 2023
ಅಯ್ಯಪ್ಪ ಸ್ವಾಮಿ ಭಕ್ತರ ವಾಹನ ಅಪಘಾತ ಓರ್ವ ಬಾಲಕ ಸಾವು ಮೂವರಿಗೆ ಗಂಭೀರ ಗಾಯ ಕೆರಳದ ಯಡಪ್ಪಿ ಎಂಬುವಲ್ಲಿ ನಡೆದ ಘಟನೆ ಕಳೆದ ಜ ೧ ರಂದು ಧಾರವಾಡದಿಂದ ಕೆರಳಕ್ಕೆ ಹೋಗಿದ್ದ ೮ ಜನ ಭಕ್ತರು ವಾಪಸ್ ಬರುವಾಗ ಸಂಭವಿಸಿದ ಅಪಘಾತ ಸುಮೀತ ಪಾಂಡೆ ಎಂಬ ೧೦ ವರ್ಷದ ಬಾಲಕ ಸ್ಥಳದಲ್ಲಿ ಸಾವು ಇನ್ನು ಮೂವರಿಗೆ ಚಿಕಿತ್ಸೆ ಮುಂದುವರಿಕೆ ಸಾವನ್ನಪ್ಪಿದ ಬಾಲಕ ಧಾರವಾಡ ನಗರದ ಸೈದಾಪೂರದ ನಿವಾಸಿ ಬಾಲಕನ ಶವ […]

Advertisement

Wordpress Social Share Plugin powered by Ultimatelysocial